ಕುಂಭರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೀಗೆ ಮಾಡಿ

ಶನಿವಾರ, 28 ಡಿಸೆಂಬರ್ 2019 (06:04 IST)
ಬೆಂಗಳೂರು : ಎಲ್ಲರಿಗೂ ಕೋಟ್ಯಾಧಿಪತಿಯಾಗಬೇಕೆಂಬ ಆಸೆ ಇರುತ್ತದೆ. ಆದಕಾರಣ ಅಂತವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ಕುಂಭರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.



ಕುಂಭರಾಶಿಯಲ್ಲಿ ಹುಟ್ಟಿದವರು ಪೂರ್ವದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಬೇಕು. ಇವರು ದಕ್ಷಿಣ ದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಬಾರದು. ನೀವು ಮನೆಯ ಆಗ್ನೆಯ ದಿಕ್ಕಿನಲ್ಲಿ ಯಾವುದಾದರೊಂದು ಗಿಡವನ್ನು ಬೆಳೆಸಬೇಕು. ಅದರಲ್ಲೂ ದಾಸವಾಳ ಗಿಡ ಬೆಳೆದರೆ ಉತ್ತಮ.


ಹಾಗೇ ಇವರು ಪ್ರತಿ ಮಂಗಳವಾರ ಮತ್ತು ಶನಿವಾರದಂದು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು. ಮಾತ್ರವಲ್ಲ ದೇವಸ್ಥಾನದ ಖಾಲಿ ಇರುವ ಸ್ಥಳದಲ್ಲಿ ಅರಳಿ ಮರ ಬೆಳೆಸಿ ನೀರು ಹಾಕಿದರೆ ನೀವು ಬೇಗ ಧನವಂತರಾಗುತ್ತೀರಿ. ಹಾಗೇ ಯಾವುದೇ ಮರವನ್ನು ಕತ್ತರಿಸಬಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ