ಜಾತಕದಲ್ಲಿ ಈ ಯೋಗವಿದ್ದರೆ ವಿದ್ಯೆ ತಲೆಗೆ ಹತ್ತುತ್ತದೆ!

ಶನಿವಾರ, 29 ಡಿಸೆಂಬರ್ 2018 (09:13 IST)
ಬೆಂಗಳೂರು: ವಿದ್ಯಾಭ್ಯಾಸದಲ್ಲಿ ಮಕ್ಕಳು ಮುಂದಿರಬೇಕು ಎನ್ನುವುದು ಎಲ್ಲಾ ಪೋಷಕರ ಆಸೆ. ಅದಕ್ಕೆ ಸರಸ್ವತಿ ದೇವಿಯ ಅನುಗ್ರಹ ಮುಖ್ಯ.


ನಮ್ಮ ಜಾತಕದಲ್ಲಿ ಸರಸ್ವತಿ ಯೋಗವಿದ್ದರೆ ವಿದ್ಯೆ ಬೇಗ ತಲೆಗೆ ಹತ್ತುವುದಲ್ಲದೆ, ಉದ್ಯೋಗದಲ್ಲೂ ಮುನ್ನಡೆ ಲಭಿಸುತ್ತದೆ. ಹಾಗಿದ್ದರೆ ಸರಸ್ವತಿ ಯೋಗವಿದೆಯೇ ಎಂದು ತಿಳಿಯುವುದು ಹೇಗೆ?

ಜಾತಕದಲ್ಲಿ ಗುರು, ಶುಕ್ರ ಮತ್ತು ಬುಧ ಗ್ರಹಗಳು ಒಂದು, ನಾಲ್ಕು, ಏಳು ಮತ್ತು ಹತ್ತನೇ ಮನೆಯಲ್ಲಿದ್ದಾಗ ಅಥವಾ ಐದು, ಒಂಭತ್ತು ಮತ್ತು ಎರಡನೇ ಮನೆಯಲ್ಲಿದ್ದಾಗ ಸರಸ್ವತಿ ಯೋಗವಿದೆ ಎಂದರ್ಥ. ಹೀಗಿರುವ ಮಕ್ಕಳೂ ವಿದ್ಯಾಭ್ಯಾಸದಲ್ಲಿ ಚುರುಕಾಗಿರುತ್ತಾರೆ. ಇವರಿಗೆ ವಿದ್ಯಾ ಅಧಿದೇವತೆ ಸರಸ್ವತಿಯ ಅನುಗ್ರಹ ಸಾಕಷ್ಟಿದೆ ಎಂದರ್ಥ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ