ಬಿಂದಿ ಇಲ್ಲಿಯೇ ಇಡಬೇಕು ಯಾಕೆ?

ಶುಕ್ರವಾರ, 21 ಡಿಸೆಂಬರ್ 2018 (09:10 IST)
ಬೆಂಗಳೂರು: ಸಾಮಾನ್ಯವಾಗಿ ಬಿಂದಿ ಇಡುವಾಗ ನಮ್ಮ ಹುಬ್ಬುಗಳ ನಡುವೆ ಇಟ್ಟುಕೊಳ್ಳುತ್ತೇವೆ. ಆದರೆ ಇಲ್ಲಿಯೇ ಬಿಂದಿ ಇಡುವುದರ ಹಿಂದಿನ ಮರ್ಮವೇನು ಗೊತ್ತಾ?


ಎರಡು ಹುಬ್ಬುಗಳ ನಡುವೆ ಖಾಲಿ ಇರುವ ಜಾಗದಲ್ಲಿ ಕುಂಕುಮ ಅಥವಾ ಬೊಟ್ಟು ಇಡಬೇಕು. ಇದು ಮೆದುಳು, ಕಣ್ಣು, ತಲೆ ನಿಯಂತ್ರಿಸುವ ಭಾಗ. ಇಲ್ಲಿ ಮನುಷ್ಯ ದೇಹದ ಆರನೇ ಚಕ್ರ ಅಜ್ಞ ಚಕ್ರವಿದ್ದು, ಇದು ಮೇಲೆ ಹೇಳಿದ ಎಲ್ಲಾ ಭಾಗಗಳನ್ನು ನಿಯಂತ್ರಿಸುತ್ತದೆ.

ಅಷ್ಟೇ ಅಲ್ಲ ಇಲ್ಲಿ ಕುಂಕುಮ ಅಥವಾ ಬೊಟ್ಟು ಇಡಲು ನಾವು ಬೆರಳಿನಿಂದ ಒತ್ತಿ ಹಿಡಿದರೆ ಆ ಭಾಗಕ್ಕೆ ಪ್ರತಿನಿತ್ಯ ರಕ್ತಸಂಚಾರ ಸುಗಮಾಗಿಸಲು ವ್ಯಾಯಾಮ ಸಿಕ್ಕಂತಾಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಏಕೆ, ಹಣೆಯಲ್ಲಿ ಕುಂಕುಮವಿದ್ದರೆ ಯಾವ ದುಷ್ಟ ಶಕ್ತಿಗಳೂ ನಮ್ಮ ಬಳಿ ಬಾರರು ಎಂಬುದು ಹಿಂದೂ ಸಂಪ್ರದಾಯದ ನಂಬಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ