ಹೋಟೆಲ್ ತೆರೆಯಲು ಅನುಮತಿ: ಇಂದು ನಿರ್ಧಾರ

ಮಂಗಳವಾರ, 26 ಮೇ 2020 (11:01 IST)
ಬೆಂಗಳೂರು: ಲಾಕ್ ಡೌನ್ ನಡುವೆ ಹೋಟೆಲ್ ಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಹೋಟೆಲ್ ಮಾಲಿಕರು ಒತ್ತಾಯಿಸುತ್ತಲೇ ಇದ್ದಾರೆ. ಈ ಬಗ್ಗೆ ಇಂದು ನಿರ್ಧಾರವಾಗಲಿದೆ.


ಇಂದು ಹೋಟೆಲ್ ಮಾಲಿಕರ ಜತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದು, ಈ ಉದ್ಯಮ ಮತ್ತೆ ಮೊದಲಿನಂತೆ ತೆರೆಯಬೇಕೇ ಅಥವಾ ಈ ಮೊದಲಿರುವಂತೇ ಕೇವಲ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಬೇಕೇ ಎಂಬಿತ್ಯಾದಿ ಬಗ್ಗೆ ತೀರ್ಮಾನವಾಗಲಿದೆ.

ಹೋಟೆಲ್ ತೆರೆಯದೇ ಹಲವಾರು ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ ಎಂಬುದು ಮಾಲಿಕರ ಒತ್ತಾಯವಾಗಿದೆ. ಹೀಗಾಗಿ ಈ ಬಗ್ಗೆ ಸಿಎಂ ಇಂದು ತೀರ್ಮಾನ ಕೈಗೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ