ಸಿಡ್ನಿ ಟೆಸ್ಟ್ ಬಳಿಕ ಹನುಮ ವಿಹಾರಿಗೆ ರಾಹುಲ್ ದ್ರಾವಿಡ್ ರಿಂದ ಬಂದ ಸಂದೇಶವೇನು ಗೊತ್ತಾ?

ಶುಕ್ರವಾರ, 22 ಜನವರಿ 2021 (08:11 IST)
ಮುಂಬೈ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ನೋವಿನ ನಡುವೆಯೂ ಒಂದು ದಿನ ಭರ್ತಿ ನಿಂತು ತಂಡವನ್ನು ಸೋಲಿನಿಂದ ಕಾಪಾಡಿದ ಬಳಿಕ ಗುರು ರಾಹುಲ್ ದ್ರಾವಿಡ್ ತಮಗೆ ಸಂದೇಶ ಕಳುಹಿಸಿದ್ದರ ಬಗ್ಗೆ ಹನುಮ ವಿಹಾರಿ ಬಹಿರಂಗಪಡಿಸಿದ್ದಾರೆ.

 

ಎ ತಂಡದಲ್ಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಹನುಮ ವಿಹಾರಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ವೀರೋಚಿತ ಪ್ರದರ್ಶನ ನೀಡಿದ ಬಳಿಕ ಮೆಸೇಜ್ ಮಾಡಿದ್ದರಂತೆ. ಈ ಬಗ್ಗೆ ಮಾತನಾಡಿರುವ ವಿಹಾರಿ ‘ಅವರೆಷ್ಟು ಒಳ್ಳೆಯ ವ್ಯಕ್ತಿ ಎಂದರೆ ಸಿಡ್ನಿ ಟೆಸ್ಟ್ ಬಳಿಕ ನನಗೆ ‘ತುಂಬಾ ಚೆನ್ನಾಗಿ ಆಡಿದೆ. ವೆಲ್ ಡನ್’ ಎಂದು ಮೆಸೇಜ್ ಮಾಡಿ ಅಭಿನಂದಿಸಿದರು’ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ