ಅಂಡರ್ 19 ವಿಶ್ವಕಪ್ ಫೈನಲ್ ವಿವಾದ: ಬಾಂಗ್ಲಾದೇಶ-ಭಾರತ ಕ್ರಿಕೆಟಿಗರಿಗೆ ಐಸಿಸಿ ಶಿಕ್ಷೆ

ಮಂಗಳವಾರ, 11 ಫೆಬ್ರವರಿ 2020 (09:43 IST)
ದುಬೈ: ಅಂಡರ್ 19 ವಿಶ್ವಕಪ್ ಫೈನಲ್ ಗೆದ್ದ ಬಳಿಕ ಅಸಭ್ಯ ವರ್ತನೆ ತೋರಿದ ಬಾಂಗ್ಲಾ ಕ್ರಿಕೆಟಿಗರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಭಾರತೀಯ ಕ್ರಿಕೆಟಿಗರ ಮೇಲೆ ಹಲ್ಲೆಗೆ ಮುಂದಾಗಿದ್ದ ಬಾಂಗ್ಲಾ ಕ್ರಿಕೆಟಿಗರಿಗೆ ಐಸಿಸಿ ಶಿಕ್ಷೆ ವಿಧಿಸಿದೆ.

 
ಈ ಸಂಬಂಧ ಮೂವರು ಬಾಂಗ್ಲಾ ಕ್ರಿಕೆಟಿಗರು ಮತ್ತು ಇಬ್ಬರು ಭಾರತೀಯ ಕ್ರಿಕೆಟಿಗರ ವಿರುದ್ಧ ಐಸಿಸಿ ಶಿಸ್ತು ಕ್ರಮ ಕೈಗೊಂಡಿದೆ. ಬಾಂಗ್ಲಾ ಆಟಗಾರರಿಗೆ ಆರು ಡಿಮೆರಿಟ್ ಪಾಯಿಂಟ್ ಮತ್ತು ಭಾರತೀಯ ಕ್ರಿಕೆಟಿಗರಿಗೆ ಐವರು ಶಿಕ್ಷೆ ವಿಧಿಸಲಾಗಿದೆ.

ಬಾಂಗ್ಲಾ ತೌಹಿದ್ ಹ್ರಿದಯ್, ಶಮಿಮ್ ಹೊಸೈನ್ ಮತ್ತು ರಕ್ಬಿಲ್ ಹಸನ್ ಶಿಕ್ಷೆಗೊಳಗಾಗಿದ್ದರೆ ಭಾರತದ ಆಕಾಶ್ ಸಿಂಗ್ ಮತ್ತು ರವಿ ಬಿಷ್ಣೊಯ್ ಶಿಕ್ಷೆಗೊಳಗಾಗ ಕ್ರಿಕೆಟಿಗರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ