ಕರ್ನಾಟಕಕ್ಕೆ ಕೈ ಕೊಡಬೇಡಿ! ಕೆಎಲ್ ರಾಹುಲ್ ಗೆ ಅಭಿಮಾನಿಗಳ ಒತ್ತಾಯ

ಬುಧವಾರ, 19 ಫೆಬ್ರವರಿ 2020 (09:31 IST)
ಬೆಂಗಳೂರು: ಕರ್ನಾಟಕ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದು ಫೆಬ್ರವರಿ 21 ರಿಂದ ಕ್ವಾರ್ಟರ್ ಫೈನಲ್ ಪಂದ್ಯವಾಡಲಿದೆ. ಈ ಪಂದ್ಯಕ್ಕೆ ತಂಡ ಪ್ರಕಟಿಸಲಾಗಿದ್ದು ಮನೀಶ‍್ ಪಾಂಡೆ ತಂಡಕ್ಕೆ ಕಮ್ ಬ್ಯಾಕ್ ಆಗಿದ್ದರೆ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ.


ರಾಷ್ಟ್ರೀಯ ತಂಡದಲ್ಲಿ ಆಡದಿದ್ದರೂ ಎನ್ ಸಿಎನಲ್ಲಿ ತರಬೇತಿ ಪಡೆಯುತ್ತಿರುವ ರಾಹುಲ್ ರಣಜಿಯಿಂದ ಹೊರಗುಳಿದು ವಿಶ್ರಾಂತಿ ಪಡೆಯಲಿದ್ದಾರೆ. ಆದರೆ ರಾಹುಲ್ ನಿರ್ಧಾರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.

ಅತ್ಯುತ್ತಮ ಫಾರ್ಮ್ ನಲ್ಲಿರುವ ರಾಹುಲ್ ರಣಜಿ ಕ್ವಾರ್ಟರ್ ಫೈನಲ್ ಹಂತದಲ್ಲಿರುವಾಗ ತಂಡದಲ್ಲಿದ್ದಿದ್ದರೆ ಕರ್ನಾಟಕಕ್ಕೆ ಬಲ ಬರುತ್ತಿತ್ತು. ಹೀಗಾಗಿ ವಿಶ್ರಾಂತಿ ಪಡೆಯಬೇಡಿ. ನಿಮ್ಮ ತವರು ತಂಡವನ್ನು ಕ್ವಾರ್ಟರ್ ಫೈನಲ್ ನಲ್ಲಿ ಗೆಲ್ಲಿಸಲು ರಣಜಿ ಆಡಬೇಕಿತ್ತು ಎಂದು ಅಭಿಮಾನಿಗಳು ಟ್ವಿಟರ್ ಮೂಲಕ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ