ಅರ್ಜುನ್ ತೆಂಡುಲ್ಕರ್ ಬಗ್ಗೆ ಸಚಿನ್ ಬಳಿ ಶ್ರೀಶಾಂತ್ ಹೇಳಿದ್ದೇನು ಗೊತ್ತಾ?

ಬುಧವಾರ, 29 ಏಪ್ರಿಲ್ 2020 (09:32 IST)
ಮುಂಬೈ: ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ ಎನ್ನುವಂತೆ ಸಚಿನ್ ತೆಂಡುಲ್ಕರ್ ಎಂಬ ದಿಗ್ಗಜ ಕ್ರಿಕೆಟಿಗನ ಪುತ್ರ ಅರ್ಜುನ್ ಕೂಡಾ ಕ್ರಿಕೆಟ್ ಅಂಗಣದಲ್ಲಿ ಈಗಾಗಲೇ ಗಮನ ಸೆಳೆಯುತ್ತಿದ್ದಾನೆ.


ಅಪ್ಪನಾಗಿ ಸಚಿನ್ ಕೂಡಾ ಮಗನ ಸಾಧನೆ ಬಗ್ಗೆ ಹೆಮ್ಮೆ ಪಡುತ್ತಾರೆ. ಇದೀಗ ಪುತ್ರ ಅರ್ಜುನ್ ಬಗ್ಗೆ ಮಾಜಿ ವೇಗಿ ಶ್ರೀಶಾಂತ್ ಹೊಗಳಿಕೆಯ ಮಾತನಾಡಿದ್ದಾರೆ. ಶ್ರೀಶಾಂತ್ ಬರ್ತ್ ಡೇಗೆ ಸಚಿನ್ ಶುಭ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸುವಾಗ ಶ್ರೀಶಾಂತ್ ಅರ್ಜುನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.

‘ಅರ್ಜುನ್ ಖಂಡಿತಾ ಮುಂದೊಂದು ದಿನ ಟೀಂ ಇಂಡಿಯಾಕ್ಕಾಗಿ ಆಡಲಿದ್ದಾರೆ. ಅವರ ಬೌಲಿಂಗ್ ನಲ್ಲಿ ವೇಗ, ತಾಳ-ಮೇಳ ಅದ್ಭುತವಾಗಿದೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ