ಓಖಿ ಚಂಡಮಾರುತ ಹೊಡೆತಕ್ಕೆ ಮದುವೆ ಮನೆ ಓಡಿದ ವಧು-ವರ, ಸಂಬಂಧಿಕರು!

ಭಾನುವಾರ, 3 ಡಿಸೆಂಬರ್ 2017 (13:12 IST)
ಕಡಲ ತೀರದಲ್ಲಿ ಚಂಡಮಾರುತ ಅಬ್ಬರ ಜೋರಾಗಿದ್ದು, ಓಖಿಯ ಹೊಡೆತಕ್ಕೆ ಮದುವೆ ಮನೆಯಿಂದ ವಧು-ವರ ಹಾಗೂ ಸಂಬಂಧಿಕರು ಓಡಿ ಹೋಗಿರುವ ಘಟನೆ ನಡೆದಿದೆ.

ಮಂಗಳೂರಿನ ಉಳ್ಳಾಲದ ಕಡಲ ಕಿನಾರೆಯ ಸಮುದ್ರ ತೀರದಲ್ಲಿ ಮದುವೆಯ ವೇದಿಕೆಗೆ ಚಂಡಮಾರುತದ ಅಲೆ ಅಪ್ಪಳಿಸಿದೆ. ಅಲೆಯ ರಭಸಕ್ಕೆ ಬೆದರಿದ ವಧು-ವರ ಹಾಗೂ ಸಂಬಂಧಿಕರು ವೇದಿಕೆಯಿಂದ ಓಡಿ ಹೋಗಿದ್ದಾರೆ.

ಮಂಗಳೂರು ಭಾಗದಲ್ಲಿ ಓಖಿ ಅಬ್ಬರ ಇನ್ನೂ ಮುಂದುವರೆದಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ