ಕೊರೋನಾ ಪರಿಹಾರ ದೇಣಿಗೆ: ಪ್ರಭಾಸ್, ಮಹೇಶ್ ಬಾಬು ಮೀರಿಸಿದ ಅಲ್ಲು ಅರ್ಜುನ್

ಶನಿವಾರ, 28 ಮಾರ್ಚ್ 2020 (09:29 IST)
ಹೈದರಾಬಾದ್: ಕೊರೋನಾ ಪೀಡಿತರ ಸಹಾಯಕ್ಕೆ ಸರ್ಕಾರಕ್ಕೆ ನೆರವಾಗಲು ದೇಣಿಗೆ ನೀಡುತ್ತಿರುವ ತೆಲುಗು ಸ್ಟಾರ್ ನಟರು ಪೈಪೋಟಿಗೆ ಬಿದ್ದವರಂತೆ ಸಹಾಯ ಮಾಡುತ್ತಿದ್ದಾರೆ.


ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳಿಗೆ ತೆಲುಗು ಸ್ಟಾರ್ ನಟರು ಭಾರೀ ಮೊತ್ತದ ದೇಣಿಗೆ ನೀಡುತ್ತಿದ್ದಾರೆ. ಪವನ್ ಕಲ್ಯಾಣ್ 50 ಲಕ್ಷ, ನಿತಿನ್ 10 ಲಕ್ಷ, ಮಹೇಶ್ ಬಾಬು ಮತ್ತು ಪ್ರಭಾಸ್ ತಲಾ 1 ಕೋಟಿ ರೂ. ನೀಡಿ ಸುದ್ದಿಯಾಗಿದ್ದರು.

ಇದೀಗ ಇನ್ನೊಬ್ಬ ಸ್ಟಾರ್ ನಟ ಅಲ್ಲು ಅರ್ಜುನ್ 1.25 ಕೋಟಿ ದೇಣಿಗೆ ನೀಡುವ ಮೂಲಕ ಇವರೆಲ್ಲರನ್ನೂ ಮೀರಿಸಿದ್ದಾರೆ. ವಿಶೇಷವೆಂದರೆ ಅಲ್ಲು ಅರ್ಜುನ್ ಆಂಧ‍್ರ, ತೆಲಂಗಾಣ ಮಾತ್ರವಲ್ಲದೆ, ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ದೇಣಿಗೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ