ವಿದೇಶದಲ್ಲಿರುವ ಅಭಿಮಾನಿಗಳಿಗೆ ಈಗ ಸ್ಯಾಂಡಲ್ ವುಡ್ ಅಭಯ

ಸೋಮವಾರ, 1 ಜೂನ್ 2020 (09:01 IST)
ಬೆಂಗಳೂರು: ಕೊರೋನಾ ಎನ್ನುವುದು ಭಾರತಕ್ಕೆ ಮಾತ್ರವಲ್ಲ, ವಿದೇಶದಲ್ಲೂ ಜನರು ಮನೆಯಿಂದ ಹೊರಬರಲಾಗದ ಸ್ಥಿತಿಯನ್ನು ತಂದಿದೆ. ಈ ನಡುವೆ ವಿದೇಶದಲ್ಲಿ ಅನೇಕ ಭಾರತೀಯರೂ ತವರಿಗೂ ಮರಳಲಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ.


ಆ ರೀತಿ ವಿದೇಶದಲ್ಲಿ ಬಂಧಿಯಾಗಿರುವ ಕನ್ನಡಿಗರಿಗೆ ಈಗ ಸ್ಯಾಂಡಲ್ ವುಡ್ ಸ್ಟಾರ್ ಗಳು ಸಾಂತ್ವನ ಹೇಳುತ್ತಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಕಿಚ್ಚ ಸುದೀಪ್, ಉಪೇಂದ್ರ, ಪುನೀತ್ ರಾಜಕುಮಾರ್ ಈಗಾಗಲೇ ಜೂಮ್ ಆಪ್ ಮೂಲಕ ರಿಜಿಸ್ಟರ್ ಆದ ಆಯ್ದ ಅಭಿಮಾನಿಗಳೊಂದಿಗೆ ಲೈವ್ ಚ್ಯಾಟ್ ನಡೆಸಿ ಮಾನಸಿಕವಾಗಿ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ