ಗುಣಮುಖರಾಗಲೆಂದು ಹೋಮ, ಪೂಜೆ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ಸುಮಲತಾ

ಶುಕ್ರವಾರ, 10 ಜುಲೈ 2020 (09:03 IST)
ಮಂಡ್ಯ: ಕೊರೋನಾ ಸೋಂಕಿತೆಯಾಗಿರುವ ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ತಮಗಾಗಿ ಪ್ರಾರ್ಥನೆ ಸಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.


ಸದ್ಯಕ್ಕೆ ಕೊರೋನಾದಿಂದಾಗಿ ಕ್ವಾರಂಟೈನ್ ನಲ್ಲಿರುವ ಸುಮಲತಾ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದಾರೆ.

ಮಂಡ್ಯದಲ್ಲಂತೂ ಅಭಿಮಾನಿಯೊಬ್ಬರು ಸುಮಲತಾ ಗುಣಮುಖರಾಗಲೆಂದು ಹೋಮ ನಡೆಸಿದ್ದಾರೆ. ಇದನ್ನು ನೋಡಿ ಭಾವುಕರಾದ ಸುಮಲತಾ ತನಗಾಗಿ ಪ್ರಾರ್ಥಿಸುತ್ತಿರುವ ಅಭಿಮಾನಿಗಳು, ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ನಿಮ್ಮ ಪ್ರೀತಿಗೆ ನಾನು ಚಿರಋಣಿ. ಕೊರೋನಾ ಪೀಡಿತರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ