ಅಲ್ಲು ಅರ್ಜುನ್ ‘ಪುಷ್ಪ’ಗೆ ಉಪೇಂದ್ರ ವಿಲನ್?!

ಶನಿವಾರ, 9 ಮೇ 2020 (08:56 IST)
ಬೆಂಗಳೂರು:ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಬಹುಭಾಷಾ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಖಳನಾಯಕನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಮೂಲದ ಸಿನಿಮಾ ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾಗೆ ಈಗಾಗಲೇ ಕನ್ನಡ ನಟ ಡಾಲಿ ಧನಂಜಯ್ ಸೇರ್ಪಡೆಯಾಗಿದ್ದರು.

ಇದೀಗ ತೆಲುಗಿನಲ್ಲೂ ತಮ್ಮದೇ ಅಭಿಮಾನೀ ಬಳಗವನ್ನು ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ. ರಂಗಸ್ಥಳ ಖ್ಯಾತಿಯ ಸುಕುಮಾರ್ ಈ ಚಿತ್ರದ ನಿರ್ದೇಶಕರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ