ಡಿ ಬಾಸ್ ದರ್ಶನ್ ಮನಗೆದ್ದ ಪಾನಿಪೂರಿ ಅಂಗಡಿಯಾತ ಯಾರು? ಹಿನ್ನಲೆಯೇನು?

ಶುಕ್ರವಾರ, 29 ಡಿಸೆಂಬರ್ 2023 (08:40 IST)
ಬೆಂಗಳೂರು: ಕಾಟೇರ ಸಿನಿಮಾ ಪ್ರಮೋಷನ್ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾನಿಪೂರಿ ಅಂಗಡಿಯೊಬ್ಬರ ಬಗ್ಗೆ ಹೇಳಿದ್ದು ಈಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಸಂದರ್ಶನವೊಂದರಲ್ಲಿ ದರ್ಶನ್, ಬೆಂಗಳೂರಿನ ನಾಗರಭಾವಿಯಲ್ಲಿ ವಿಕಲಚೇತನರೊಬ್ಬರು ನಡೆಸುತ್ತಿರುವ ಪಾನಿಪೂರಿ ಅಂಗಡಿ ಬಗ್ಗೆ ಮಾತನಾಡಿದ್ದರು. ಅವರು ನಮಗೆ ಸ್ಪೂರ್ತಿ. ಅಂಗ ವೈಫಲ್ಯವಿದೆಯೆಂದು ಯಾರ ಬಳಿಯೂ ಭಿಕ್ಷೆ ಬೇಡುತ್ತಿಲ್ಲ. ಬದಲಾಗಿ ತಾವೇ ನಾಲ್ಕು ಜನಕ್ಕೆ ಕೆಲಸ ಕೊಡುವ ಹಾಗೆ ಆಗಿದ್ದಾರೆ. ಅವರೆಲ್ಲಾ ನಮಗೆ ಸ್ಪೂರ್ತಿ ಎಂದಿದ್ದಾರೆ.

ಜೊತೆಗೆ ತಮ್ಮ ಸಂಗಡಿಗರಿಗೆ ಆ ಅಂಗಡಿಗೆ ಒಮ್ಮೆ ತಾನು ಹೋಗಬೇಕು ಎಂದು ಹೇಳಿಕೊಂಡಿದ್ದಾಗಿ ದರ್ಶನ್ ಹೇಳಿದ್ದರು. ಅವರ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದೀಗ ಆ ಚಾಟ್ಸ್ ಅಂಗಡಿ ಕೂಡಾ ಫೇಮಸ್ ಆಗಿದೆ.

ನಾಗರಭಾವಿಯಲ್ಲಿ ಹೊಟ್ಟೆಪಾಡು ಚಾಟ್ಸ್ ಎಂಬ ಚಾಟ್ಸ್ ಸೆಂಟರ್ ಇದೆ. ವೀರೇಶ್ ಅದರ ಮಾಲಿಕರು. ಅವರಿಗೆ ಒಂದು ಕಾಲು ಊನವಿದೆ. ಹಾಗಂತ ಅವರು ಸುಮ್ಮನೇ ಕುಳಿತಿಲ್ಲ. ಚಿಕ್ಕದಾಗಿ ಟ್ರಕ್ ಒಂದರಲ್ಲಿ ಶುರು ಮಾಡಿದ್ದ ಚಾಟ್ಸ್ ಸೆಂಟರ್ ಈಗ ನಾಲ್ಕು ಜನಕ್ಕೆ ಕೆಲಸ ಕೊಡುವ ಮಟ್ಟಿಗೆ ಬೆಳೆದು ನಿಂತಿದೆ. ಒಂದು ವರ್ಷ ಹಿಂದೆಯೇ ಯೂ ಟ್ಯೂಬ್ ನಲ್ಲಿ ಈ ಹೊಟ್ಟೆಪಾಡು ಚಾಟ್ಸ್ ಬಗ್ಗೆ ಪ್ರಸಾರವಾಗಿತ್ತು. ಆದರೆ ದರ್ಶನ್ ಸಂದರ್ಶನದಲ್ಲಿ ಆ ಸೆಂಟರ್ ಬಗ್ಗೆ ಹೇಳಿದ ಮೇಲೆ ಇದು ಇನ್ನಷ್ಟು ಫೇಮಸ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ