ಕಾಳಿ ಮಠದ ಸ್ವಾಮೀಜಿ ರಿಷಿ ಕುಮಾರ್ ಅವರನ್ನು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿರುವುದಕ್ಕೆ ಕಾರಣವೇನು?

ಶನಿವಾರ, 10 ಮಾರ್ಚ್ 2018 (06:08 IST)
ಬೆಂಗಳೂರು : ಇತ್ತಿಚಿಗೆ ಪುನೀತ್ ರಾಜ್ ಕುಮಾರ್ ಹಾಗೂ ತಮನ್ನಾ ಅವರು ನಟಿಸಿದ ಖಾಸಗಿ ಕಂಪೆನಿಯೊಂದರ ಜಾಹೀರಾತಿನ ವಿರುದ್ಧ ಕಾಳಿ ಮಠದ ಸ್ವಾಮೀಜಿ ರಿಷಿ ಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.


ಈ ಜಾಹೀರಾತಿನಲ್ಲಿ ನಾಡ ಪ್ರಭು ಕೆಂಪೇಗೌಡರನ್ನು ದುರಪಯೋಗಪಡಿಸಿಕೊಂಡಿದ್ದಾರೆ ಎಂದು ರಿಷಿ ಕುಮಾರ್ ಸ್ವಾಮೀಜಿ ಆರೋಪಿಸಿ ಈ ಜಾಹೀರಾತನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಉಗ್ರಸ್ವರೂಪದ ಹೋರಾಟ ಮಾಡುವುದಾಗಿ ತಿಳಿಸಿದ್ದರು. ಈ ಬಗ್ಗೆ ಮಾತನಾಡಿದ ಸ್ವಾಮೀಜಿ, ‘ ಈ ಜಾಹೀರಾತಿಗೆ ಕನ್ನಡಿಗರ ವಿರೋಧವಾಗಬಾರದು ಎಂದು ಪುನೀತ್ ಅವರನ್ನು ಅಸ್ತ್ರವಾಗಿ ಉಪಯೋಗಿಸಿಕೊಂಡಿದ್ದಾರೆ. ಪುನೀತ್ ಅವರಿಗೆ ಇಂತಹ ಸೂಕ್ಷ್ಮ ಸಂಗತಿ ಅರ್ಥವಾಗದೆ ಹೋದದ್ದು ನಿಜಕ್ಕೂ ದುಃಖದ ಸಂಗತಿ ‘ ಎಂದು ಹೇಳಿದ್ದರು. ಈ ಮಾತನ್ನು ಕೇಳಿದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸ್ವಾಮೀಜಿಯನ್ನು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಸ್ವಾಮಿಜಿಗೆ  ಫೋನ್ ಮಾಡಿ ಪುನೀತ್ ಅವರ ಬಳಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. ನಂತರ ಸ್ವಾಮೀಜಿ ಫೇಸ್ ಬುಕ್ ಲೈವ್ ಗೆ ಬಂದು ತನಗೆ ಬೇಸರವಿರುವುದು ಪುನೀತ್ ಅವರ ಮೇಲಲ್ಲಾ, ಪೋತಿಸ್ ಮಾಲೀಕರ ಮೇಲೆ ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ