ಕಳ್ಳದಾರಿಯಿಂದ ರಾಜ್ಯಕ್ಕೆ ಆಗಮಿಸಿದವರಿಗೆ ಸರ್ಕಾರದಿಂದ ಬಿಗ್ ಶಾಕ್

ಗುರುವಾರ, 28 ಮೇ 2020 (09:50 IST)
Normal 0 false false false EN-US X-NONE X-NONE

ಬೆಂಗಳೂರು : ಕಳ್ಳದಾರಿಯಿಂದ ರಾಜ್ಯಕ್ಕೆ ಆಗಮಿಸಿದವರಿಗೆ ಇದೀಗ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

 

ಹೈರಿಸ್ಕ್ ರಾಜ್ಯಗಳಿಂದ ಕಳ್ಳಮಾರ್ಗದಲ್ಲಿ ಜನರು ಆಗಮಿಸಿದ್ದು, ಹೀಗೆ ಕಳ್ಳಮಾರ್ಗದಲ್ಲಿ ಬಂದವರಿಗೆ ಕೊರೊನಾ ಸೋಂಕು ತಗುಲಿರುವ ಸಂಭವವಿರುತ್ತದೆ. ಆದರೆ ಇವರು  ಹೋಮ್ ಕ್ವಾರಂಟೈನ್ ಆಗದೆ, ಸರ್ಕಾರದ ಕ್ವಾರಂಟೈನ್ ಕೇಂದ್ರಕ್ಕೂ ಹೋಗದೆ ಕಳ್ಳಾಟ ನಡೆಸುತ್ತಿದ್ದಾರೆ.
 

ಹೀಗಾಗಿ ಸೋಂಕಿತರನ್ನು ಪತ್ತೆ ಹಚ್ಚುವುದೇ ದೊಡ್ಡ ಸಮಸ್ಯೆ ಯಾದ್ದರಿಂದ ಇಂತಹ ಸೋಂಕಿತರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಲಾಗಿದೆ.  ಕಳ್ಳದಾರಿಯಲ್ಲಿ ಬಂದವರು ಮಾಹಿತಿ ಮುಚ್ಚಿಡುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಮೊಬೈಲ್ ಸಿಡಿಆರ್ ಮೂಲಕ ಪೊಲೀಸರ ಸಹಾಯದೊಂದಿಗೆ ಸೋಂಕಿತರ ಪತ್ತೆಗೆ ಮುಂದಾಗಿದೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ