ಹೊಸ ವರ್ಷಕ್ಕೆ ನಗರ ಕಮಿಷನರ್​ ಮಾದರಿ ನಡೆ

ಸೋಮವಾರ, 1 ಜನವರಿ 2024 (16:44 IST)
ಹೊಸ ವರ್ಷಕ್ಕೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾದರಿಯಾಗಿದ್ದಾರೆ.. ಹೊಸ ವರ್ಷ ಮತ್ತು ಕೆಲ ವಿಶೇಷ ದಿನಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಕಿರಿಯ ಅಧಿಕಾರಿಗಳು ವಿಶ್ ಮಾಡ್ತಾರೆ. ಈ ಹಿನ್ನೆಲೆ ಹೊಸ ವರ್ಷಕ್ಕೆ ವಿಶ್ ಮಾಡಲು ಬರುವ ಕಿರಿಯ ಅಧಿಕಾರಿಗಳಿಗೆ ಹೂಗೂಚ್ಚ, ಬೊಕ್ಕೆ, ಸಿಹಿತಿನಿಸು ನೀಡುವ ಬದಲು ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದು ಕಮಿಷನರ್ ಬಿ.ದಯಾನಂದ ಹೇಳಿದ್ದಾರೆ.

ಹೂಗುಚ್ಚ, ಸಿಹಿತಿನಿಸು ನೀಡಿ ಶುಭಾಶಯ ಕೋರುವುದು ವಾಡಿಕೆ. ಎಸಿಪಿ ಮತ್ತು ಇನ್ಸ್​​​​​ಪೆಕ್ಟರ್​​​​ ಹಂತದ ಅಧಿಕಾರಿಗಳ ವರ್ಚ್ಯುಯಲ್ ಮೀಟಿಂಗ್​​​ನಲ್ಲಿ ಹೂಗೂಚ್ಚ ಮತ್ತು ಸಿಹಿತಿನಿಸು ತರದಂತೆ ಆಯುಕ್ತರು ಸೂಚಿಸಿದ್ರು. ಹೂಗುಚ್ಚ ಸುಖಾಸುಮ್ಮನೆ ವ್ಯರ್ಥವಾಗುತ್ತೆ, ಇದ್ರಿಂದ ಯಾರಿಗೂ ಉಪಯೋಗವಿಲ್ಲ.

ಆ ಹಣವನ್ನ ನಿಮ್ಮ ವ್ಯಾಪ್ತಿಯ ಅನಾಥಾಶ್ರಮಳಿಗೆ ದಿನಸಿ, ಸಿಹಿತಿನಿಸು ಅಥವಾ ಊಟಕ್ಕೆ ವ್ಯಯಿಸಿ ಎಂದು ಸಲಹೆ ನೀಡಿದ್ದಾರೆ. ಅನಾಥಾಶ್ರಮಗಳಿಗೆ ಸಹಾಯ ಮಾಡಿದ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ, ಪೋಟೋ ಹಂಚಿಕೊಳ್ಳುವುದರಿಂದ ಮತ್ತೊಬ್ಬರಿಗೂ ಮಾದರಿಯಾಗಬಹುದು ಎಂದು ಸಲಹೇ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ