ಪೇಜಾವರ ಶ್ರೀಗಳಂತಹ ಅಪರೂಪದ ಯತಿವರ್ಯರಿರುವುದು ಕಷ್ಟ- ಸಿಎಂ ಸಂತಾಪ

ಭಾನುವಾರ, 29 ಡಿಸೆಂಬರ್ 2019 (10:28 IST)
ಉಡುಪಿ : ಪೇಜಾವರ ಮಠದ  ವಿಶ್ವೇಶ ತೀರ್ಥ ಸ್ವಾಮೀಜಿ ಇಂದು ವಿಧಿವಶರಾದ ಹಿನ್ನಲೆಯಲ್ಲಿ  ಸಿಎಂ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.



ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ವಿಧಿವಶರಾದ ಹಿನ್ನಲೆ ರಾಜ್ಯಾದ್ಯಂತ 3 ದಿನ ಶೋಕಾಚರಣೆ ನಡೆಸಲಾಗುವುದು. ಅವರಂತಹ ಅಪರೂಪದ ಯತಿವರ್ಯರಿರುವುದು ಕಷ್ಟ. ಪೇಜಾವರ ಶ್ರೀಗಳನ್ನು ಕಳೆದುಕೊಂಡು ದೇಶ ಬಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ