ಕೊರೊನಾ ಎಫೆಕ್ಟ್ : ಸಚಿವ ಶ್ರೀರಾಮುಲು ಮನೆ ಹಿಂದೆ ಆಹಾರ ಕಿಟ್ ವಿತರಣೆ

ಸೋಮವಾರ, 30 ಮಾರ್ಚ್ 2020 (18:42 IST)
ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಮಾಡಲಾಗಿರೋದು ಕಡುಬಡವರಿಗೆ ತೊಂದರೆಯಾಗುತ್ತಿದೆ. ಇದನ್ನು ಗಮನಿಸಿ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಲಾಗುತ್ತಿದೆ.

ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದಿಂದ 509 ಅಲೆಮಾರಿ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ಗಳನ್ನು ವಿತರಿಸಲಾಗಿದೆ.

ಸಂಸ್ಥೆಯ ಗೌರವ ಕಾರ್ಯದರ್ಶಿ   ಕೆ.ಸಿ.ಸುರೇಶ್ ಬಾಬು, ‌ಮಾಜಿ ಅಧ್ಯಕ್ಷ ಡಾ.ರಮೇಶ್ ಗೋಪಾಲ್, ರಾಮಚಂದ್ರ, ಶ್ರಿನಿವಾಸ್ ಮೊದಲಾದವರು ಶ್ರೀಧರ ಗಡ್ಡೆ ಬಳಿ ಇರುವ ಅಲೆಮಾರಿಗಳು ವಾಸವಾಗಿರುವ ಗುಡಾರ ನಗರ ಮತ್ತು ಸಚಿವ ಶ್ರೀರಾಮುಲು‌ ಮನೆ ಹಿಂದಿನ‌ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು.

ಒಂದು‌ ಕಿಲೋ ಅಕ್ಕಿ, ಒಂದು‌ ಕಿಲೋ ಗೋದಿ, ಅರ್ಧ ಕಿಲೋ ಬೇಳೆ, ಕಾರ ಪುಡಿ ಮೊದಲಾದವುಗಳನ್ನು ಕಿಟ್ ನಲ್ಲಿರಿಸಲಾಗಿತ್ತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ