ಕೊರೊನಾ ವೈರಸ್ – ಹೊಟೇಲ್ ಮೇಲೆ ದಿಢೀರ್ ದಾಳಿ

ಸೋಮವಾರ, 16 ಮಾರ್ಚ್ 2020 (19:14 IST)
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಹೊಟೇಲ್ ಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ.

ಚಿತ್ರದುರ್ಗ ಜಿಲ್ಲಾ ಪಂಚಾಯತಿ  ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಿಂದ ದಿಢೀರ್ ಹೋಟೆಲ್ ಗಳ ಮೇಲೆ ರೈಡ್ ಮಾಡಲಾಗಿದೆ.

ಚಿತ್ರದುರ್ಗ - ಬೆಂಗಳೂರು ನಡುವೆ ಹಿರಿಯೂರಿನ ಮಧ್ಯದಲ್ಲಿರುವ ಆತಿಥ್ಯ ಮಿಡ್ವೇ ಪ್ಲಾಜಾದಲ್ಲಿ ನೂರಾರು ಬಸ್ ಗಳು  ನಿಂತು ಹೊರಡುತ್ತವೆ.

ಶುಚಿತ್ವ ಕಾಪಾಡದೇ ಇರುವುದಕ್ಕೆ ಮ್ಯಾನೇಜ್ಮೆಂಟ್ ಮೇಲೆ ಗರಂ ಆದ ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್ ಅವರು, ಕೈ ತೊಳೆಯಲು ಸೋಪ್ ಆಯಿಲ್ ಓಪನ್ ಆಗಿ ಇಟ್ಟಿದ್ದರ ಕುರಿತು ಅಸಮಧಾನ ವ್ಯಕ್ತಪಡಿಸಿದರು.  

ಊಟ ತಿಂಡಿ ಬಡಿಸುವವರು ಸರಿಯಾದ ಗ್ಲೌಜ್ ಮತ್ತು ಕ್ಯಾಪ್  ಧರಿಸಿರಲಿಲ್ಲ. ಊಟ ತಿಂಡಿಗಳನ್ನು ಸರಿಯಾಗಿ ಮುಚ್ಚಿ ಇಟ್ಟಿರಲಿಲ್ಲ.
ಸಂಜೆಯೊಳಗೆ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಮ್ಯಾನೇಜ್ಮೆಂಟ್ ಗೆ ತಾಕೀತು ಮಾಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ