ಗಡಿನಾಡ ಜನರಿಗೆ ಈಗ ಕೆಲಸ ಕಳೆದುಕೊಳ್ಳುವ ಚಿಂತೆ

ಭಾನುವಾರ, 31 ಮೇ 2020 (09:07 IST)
ಮಂಗಳೂರು: ಕೊರೋನಾದಿಂದಾಗಿ ಈಗ ಗಡಿನಾಡ ಜನರಿಗೆ ಉದ್ಯೋಗ ಕಳೆದುಕೊಳ್ಳುವ ಚಿಂತೆ ಶುರುವಾಗಿದೆ. ಇದಕ್ಕೆ ಕಾರಣ ಅಂತರಾಜ್ಯಗಳ ನಡುವಿನ ನಿರ್ಬಂಧ.


ಕೇರಳ, ಮಹಾರಾಷ್ಟ್ರದಂತಹ ಗಡಿ ಜಿಲ್ಲೆಗಳಲ್ಲಿರುವ ಜನರು ಉದ್ಯೋಗಕ್ಕಾಗಿ ಪ್ರತಿನಿತ್ಯ ಒಂದು ರಾಜ್ಯದಿಂದ ಇನ್ನೊಂದು ರಾಜ್ಯದ ಗಡಿ ದಾಟಿ ಸಂಚರಿಸುತ್ತಾರೆ. ಆದರೆ ಈಗ ಅಂತರಾಜ್ಯ ಪ್ರವೇಶಕ್ಕೆ ನಿರ್ಬಂಧವಿರುವುದರಿಂದ ಇಲ್ಲಿನವರಿಗೆ ಉದ್ಯೋಗ ಕಳೆದುಕೊಳ್ಳುವ ಭಯ ಆವರಿಸಿದೆ.

ಈಗಾಗಲೇ ಕಚೇರಿಗಳು ಪುನರಾರಂಭವಾಗಿದೆ. ಆದರೆ ನಿರ್ಬಂಧದಿಂದಾಗಿ ಕಚೇರಿಗೆ ತೆರಳಲು ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಗಡಿನಾಡ ಜನತೆ ಸರ್ಕಾರಗಳಿಗೆ ಬಸ್, ರೈಲಿನ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ