ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕನಕಪುರ ಬಂಡೆ ಡಿಕೆಶಿ ಕಣ್ಣು ಹಾಕಿದ್ರಾ?

ಮಂಗಳವಾರ, 17 ಡಿಸೆಂಬರ್ 2019 (11:03 IST)
ಬೆಂಗಳೂರು : ರಾಜ್ಯ ಕಾಂಗ್ರೆಸ್ ನ ಮಹಾ ಪರ್ವಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕನಕಪುರ ಬಂಡೆ ಡಿಕೆ ಶಿವಕುಮಾರ ಕಣ್ಣು ಹಾಕಿದ್ರಾ ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.



ತಮಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಒಲಿಯೋ ವಿಶ್ವಾಸವಿದೆ ಎಂದು ಡಿಕೆ ಶಿವಕುಮಾರ್ ಹೇಳಿರುವುದಾಗಿ ಡಿಕೆಶಿ ಆಪ್ತ ವಲಯದಿಂದ ಮಾಹಿತಿ ತಿಳಿದುಬಂದಿದೆ.


ಪರೋಕ್ಷವಾಗಿ ಕೆಲ ಮುಖಂಡರ ಜೊತೆ ಸಭೆ ನಡೆಸಿರೋ ಡಿಕೆಶಿ ಪಕ್ಷ ಸಂಘಟನೆಯ ವಿಚಾರವಾಗಿ ಮಾತುಕತೆ ನಡೆಸಿದ್ದು, ಜನವರಿ 13ರ ನಂತರ ಎಲ್ಲವೂ ಬದಲಾಗಲಿದೆ, ತಯಾರಾಗಿರಿ ಎಂದು ಕೆಲವು ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ