ಜಮೀನಿನ ವಿಚಾರಕ್ಕೆ ರೈತರ ಕುಟುಂಬದ ಹತ್ಯೆಗೆ ಮುಂದಾದ ಮಾಜಿ ಶಾಸಕರ ಅಣ್ಣನ ಮಗ

ಗುರುವಾರ, 5 ಸೆಪ್ಟಂಬರ್ 2019 (11:34 IST)
ಮಂಡ್ಯ : ಮಾಜಿ ಶಾಸಕ ಚಲುವರಾಯಸ್ವಾಮಿ ಅವರ  ಅಣ್ಣನ  ಮಗ ರೈತರ ಕುಟುಂಬದವರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ  ನಡೆದಿದೆ.




ಮಾಜಿ ಶಾಸಕ ಚಲುವರಾಯಸ್ವಾಮಿ ಅವರ ಅಣ್ಣನ ಮಗ ಉಮೇಶ್ ಎಂಬಾತ ಮರಿಗೌಡ ಅವರ ಜಮೀನಿನ ಪಕ್ಕದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ತೆಗೆದುಕೊಂಡಿದ್ದನು. ಹಾಗೆಯೇ ಮರಿಗೌಡರ ಜಮೀನಿನನ್ನು ಕೂಡ ಕೇಳಿದ್ದಾನೆ.


ಆದರೆ ಇದಕ್ಕೆ ಮರೀಗೌಡ ಒಪ್ಪದ  ಟ್ರ್ಯಾಕ್ಟರ್ ಹತ್ತಿಸಿ ರೈತ ಕುಟುಂಬವನ್ನು ಕೊಲ್ಲಲು ಮುಂದಾಗಿದ್ದಾನೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ