ಆಸ್ಪತ್ರೆಯ ಬಾಗಿಲಲ್ಲಿಯೇ ಗರ್ಭಿಣಿಯ ನರಳಾಟ

ಮಂಗಳವಾರ, 5 ಡಿಸೆಂಬರ್ 2017 (17:44 IST)
Normal 0 false false false EN-US X-NONE KN
ಬಾಗಲಕೋಟೆ: ಸರ್ಕಾರಿ ಆಸ್ಪತ್ರೆಗಳಿರುವುದೇ ಜನಸಾಮಾನ್ಯರ ಸೇವೆಗಾಗಿ. ಆದರೆ ಇಂದು ಸರ್ಕಾರಿ ಆಸ್ಪತ್ರೆಗಳಲ್ಲಿ  ಬಡವರಿಗೆ ಯಾವುದೇ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಹಾಗೇ ಕೆಲವು ಆಸ್ಪತ್ರೆಗಳಲ್ಲಿ  ಇಂದಿಗೂ ಸೌಲಭ್ಯಗಳ ಕೊರತೆ ಇದೆ.



ಇದಕ್ಕೆ ನಿದರ್ಶನವೆಂಬಂತೆ ಬಾಗಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿ ಘಟನೆಯೊಂದು ಸಂಭವಿಸಿದೆ. ಇಂದು ಹೆರಿಗೆ ನೋವಿನಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದ ಗರ್ಭಿಣಿಯೊಬ್ಬರು  ಆಸ್ಪತ್ರೆಯ ಬಾಗಿಲಲ್ಲೆ ನರಳಾಡಿದರು. ಅವರನ್ನು ಆಸ್ಪತ್ರೆಯ  ಒಳಗೆ ದಾಖಲಿಸಿಕೊಳ್ಳಲಿಲ್ಲ. ಇದಕ್ಕೆ ಕಾರಣ ಆಸ್ಪತ್ರೆಯಲ್ಲಿದ್ದ ವೈದ್ಯರ ಕೊರತೆ.


ಜಿಲ್ಲಾಸ್ಪತ್ರೆಯಲ್ಲಿ ಇದ್ದದ್ದೇ ಒಬ್ಬರೇ ಒಬ್ಬರು ಅನಸ್ತೇಶಿಯಾ ವೈದ್ಯರು. ಅವರು ಕೂಡ ದು ಆಸ್ಪತ್ರೆಗೆ ಬಂದಿರಲಿಲ್ಲವಾದ್ದರಿಂದ ಆಸ್ಪತ್ರೆಗೆ ಬಂದ ಗರ್ಭಿಣಿ ಬಾಗಿಲಲ್ಲೆ ನರಳುವ ಸನ್ನಿವೇಶ ಉಂಟಾಗಿದೆ. ನಂತರ ಅವರನ್ನು ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ