ಮಧ್ಯಾಹ್ನ ಹೊರಗೆ ಕಾಲಿಟ್ಟರೆ ಹುಷಾರ್ ಎಂದ ಗೃಹ ಸಚಿವ

ಬುಧವಾರ, 15 ಜುಲೈ 2020 (13:52 IST)
ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಮನೆಯಿಂದ ಅನಗತ್ಯ ಹೊರಗೆ ಬರುವವರಿಗೆ ಬಿಗ್ ಶಾಕ್ ಕಾದಿದೆ.

ಯಾವುದೇ ಕಾರಣಕ್ಕೂ ಮಧ್ಯಾಹ್ನ 12 ರ ಒಳಗಾಗಿ ಜನರು ಮನೆಯಲ್ಲಿರಬೇಕು. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದರೆ ಪೊಲೀಸ್ ಫೋರ್ಸ್ ಬಳಕೆ ಮಾಡಬೇಕಾದೀತು ಎಂದು ಗೃಹ ಸಚಿವ ಎಚ್ಚರಿಸಿದ್ದಾರೆ.

ರಾಜಧಾನಿ ಬೆಂಗಳೂರು ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ ಡೌನ್ ಬಿಗಿಗೊಳಿಸಲಾಗಿದೆ. ಜನರು ಸರಕಾರದೊಂದಿಗೆ ಸಹಕರಿಸಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ