ಕುಮಾರಸ್ವಾಮಿ ದೇಶದ ಪ್ರಧಾನಿನಾ? ಅವರಿಗೆ ಏನು ಅಧಿಕಾರ ಇದೆ?: BSY ಟಾಂಗ್

ಭಾನುವಾರ, 6 ಅಕ್ಟೋಬರ್ 2019 (18:45 IST)
ನೆರೆ ಪರಿಹಾರ ವಿಷಯದಲ್ಲಿ ಟೀಕೆ ಮಾಡಿದ್ದ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಟಾಂಗ್ ನೀಡಿದ್ದಾರೆ.

ನೆರೆ ಪರಿಹಾರ ಮತ್ತೆ ಬರುವುದು ಡೌಟ್ ಅಂತ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ರು. ಈ ಹೇಳಿಕೆಗೆ ಸಿಎಂ ಬಿ ಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು, ಕುಮಾರಸ್ವಾಮಿ ದೇಶದ ಪ್ರಧಾನಿನಾ?
ಅವರಿಗೆಲ್ಲಾ ಅತೃಪ್ತಿ ಅಸಮಾಧಾನ ಇದೆ. ಮಾಜಿ ಮುಖ್ಯಮಂತ್ರಿ ಆಗಿ ಬೇಜವಬ್ದಾರಿ ತನದ ಹೇಳಿಕೆ ನೀಡುತ್ತಿದ್ದಾರೆ.

ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅವರಿಗೆ ಶೋಭೆ ತರುತ್ತೆ ಅನ್ನುವುದನ್ನ ಯೋಚನೆ ಮಾಡಲಿ.

ಎರಡನೇ ಕಂತು ಬರಲ್ಲ ಅನ್ನೋಕೆ ಅವರು ಯಾರು? ಅವರಿಗೆ ಏನು ಅಧಿಕಾರ ಇದೆ. ಇದು ಕುಮಾರ ಸ್ವಾಮಿ ತೀರ್ಮಾನವೋ, ಕೇಂದ್ರ ತೀರ್ಮಾನವೋ- ಅಂತ ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಸರ್ಕಾರ ಎರಡನೇ ಕಂತಿನ ಹಣ ಬಿಡುಗಡೆ ಮಾಡುತ್ತೇವೆ ಅಂತ ಹೇಳಿದೆ ಎಂದ್ರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ