ಕೊಪ್ಪಳದಲ್ಲಿ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಶನಿವಾರ, 21 ಏಪ್ರಿಲ್ 2018 (16:02 IST)
ಕೊಪ್ಪಳ ಜಿಲ್ಲೆಯಲ್ಲಿ‌ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಜೋರಾಗಿತ್ತು. ಐದು ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಹೆಚ್.ಆರ್.  ಶ್ರೀನಾಥ್ ಅವರಿಂದ ಬಿ ಫಾರಂ ತೆಗೆದುಕೊಂಡ ಬಳಿಕ ನೇರವಾಗಿ ತಹಶೀಲ್ದಾರರ ಕಛೇರಿಯತ್ತ ಮುಖ ಮಾಡಿದರು.
ಇದಕ್ಕೂ ಮೊದಲು ಗಂಗಾವತಿ ಯ ಜೆಡಿಎಸ್ ಅಭ್ಯರ್ಥಿ ಮಾಜಿ ಎಂಎಲ್ ಸಿ ಕರಿಯಣ್ಣ ಸಂಗಟಿ ಮೊದಲಿಗೆ ಸಾಯಿಬಾಬಾ ಟೆಂಪಲ್ ಗೆ ಭೇಟಿ ನೀಡಿ ಬಾಬಾ ಆಶೀರ್ವಾವಾದ ಪಡೆದರು. ಆ ನಂತರ ಹೆಚ್. ಆರ್. ಶ್ರೀನಾಥ್ ಅವರ ನೇತೃತ್ವದಲ್ಲಿ ತಹಶೀಲ್ದಾರರಿಗೆ ನಾಮಪತ್ರ ಸಲ್ಲಿಸಿದರು. 
 
ಇನ್ನೂ ಕೊಪ್ಪಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾದ ಕೆಎಮ್ ಸಯ್ಯದ್ ಕೂಡ ಇಂದೆ ನಾಮಪತ್ರ ಸಲ್ಲಿಸಿದರು. ಇದೀಗ ಔಪಚಾರಿಕವಾಗಿ ನಾಮಪತ್ರ ಸಲ್ಲಿಸಿರೋ ಇವರು ಸೋವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ