ಆಸ್ತಿಗಾಗಿ 9 ವರ್ಷದ ಹೆಣ್ಣು ಮಗುವನ್ನು ಕಿಡ್ನಾಪ್: ಡಿಕೆಶಿ ಹೆಸರು ಹೇಳದೆ ಗುಡುಗಿದ ದೇವೇಗೌಡ

Sampriya

ಬುಧವಾರ, 17 ಏಪ್ರಿಲ್ 2024 (17:37 IST)
Photo Courtesy X
ಮೂಡಿಗೆರೆ: ಬಿಡದಿ ಬಳಿಯ ರಸ್ತೆಯ ಬದಿಯ ಜಾಗ ಬರೆಸಿಕೊಳ್ಳಲು ಒಂಬತ್ತು ವರ್ಷದ ಹೆಣ್ಣು ಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಕೂಡಿ ಹಾಕಿದ್ದಕ್ಕೆಯಾ ಕೈ ಇನ್ನಷ್ಟು ಬಲಪಡಿಸಬೇಕಾ ಎಂದು  ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರು ಪ್ರಸ್ತಾಪಿಸದೇ ಗುಡುಗಿದರು.

ಮೂಡಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕಾದಿಂದ ಒಬ್ಬರು ಹಣ ಸಂಪಾದಿಸಿಕೊಂಡು ಬಂದಿದ್ರು. ಅವರು ಐಟಿ ಕಂಪನಿ ಸ್ಥಾಪನೆ ಮಾಡಲು ಹೊರಟಿದ್ರು. ಸ್ಟಾಂಪ್‌ ಪೇಪರ್ ತಂದು ನಕಲಿ ಕ್ರಯ ಮಾಡಿಸಿಕೊಟ್ರು. ಈ ಸಂಬಂಧ ಹೈಕೋರ್ಟ್​, ಸುಪ್ರೀಂ ಕೋರ್ಟ್​ ನಲ್ಲಿ ಮುಖಭಂಗ ಆಯ್ತು. ಆನಂತರ ಮಗುವನ್ನು ಅಪಹರಿಸಿ ಆಸ್ತಿ ಬರೆಸಿಕೊಂಡರು ಎಂದು ದೇವೇಗೌಡರು ಹೇಳಿದ್ದಾರೆ.

ಆಸ್ತಿ ಪತ್ರಕ್ಕೆ ಸಹಿ ಹಾಕಿ 9 ವರ್ಷದ ಮಗಳನ್ನು ಕರೆದುಕೊಂಡು ಹೋಗುವಂತೆ ತಿಳಿಸುತ್ತಾರೆ. ಆಸ್ತಿ ಬರೆದುಕೊಟ್ಟು ಮಗಳು ಕರೆತರುವಂತೆ ತಾಯಿ ತನ್ನ ಗಂಡನ ಕಾಲು ಹಿಡಿಯುತ್ತಾಳೆ. ಕಣ್ಣು ಕಟ್ಟಿದ ಸ್ಥಿತಿಯಲ್ಲಿ ಮಗಳನ್ನು ಅಪ್ಪನಿಗೆ ತೋರಿಸಿ ಮತ್ತೆ ಒಳಗೆ ಕರೆದೊಯ್ಯುತ್ತಾರೆ. ಚುನಾವಣೆಯಲ್ಲಿ ಈ ಪ್ರಸಂಗ ಬಳಸಿ ಎಂದು ವಕೀಲರೊಬ್ಬರು ನನಗೆ ಕೊಟ್ಟಿದ್ದರು ಎಂದು ನೆನಪಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ