ಕೋಡಿಶ್ರೀ ಹೇಳಿದ್ದ ಬಾಂಬ್ ಭವಿಷ್ಯ ನಿಜವಾಯ್ತು: ಇನ್ನೊಂದೂ ನಿಜವಾದರೆ..!

Krishnaveni K

ಸೋಮವಾರ, 11 ಮಾರ್ಚ್ 2024 (09:52 IST)
ಬೆಂಗಳೂರು: ಈ ವರ್ಷ ಬಾಂಬ್ ಸ್ಪೋಟವಾಗುತ್ತದೆ ಎಂಬ ಕೋಡಿಶ್ರೀ ಭವಿಷ್ಯ ಇತ್ತೀಚೆಗೆ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣವಾದ ಬಳಿಕ ನಿಜವಾಗಿದೆ ಎಂದು ಅನಿಸಿತ್ತು. ಆದರೆ ಇದರ ಜೊತೆಗೆ ಕೋಡಿಶ್ರೀಗಳು ಇನ್ನೊಂದು ಭವಿಷ್ಯ ನುಡಿದಿದ್ದರು. ಅದು ನಿಜವಾಗುತ್ತಾ ನೋಡಬೇಕು.

ಇತ್ತೀಚೆಗೆ ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು ಹಲವು ವಿಚಾರಗಳನ್ನು ಹೇಳಿದ್ದರು. ಅವರು ಹೇಳಿದ ಭವಿಷ್ಯ ಅನೇಕ ಬಾರಿ ನಿಜವಾಗಿದೆ. ಈ ಬಾರಿ ಜಾಗತಿಕವಾಗಿ ಮತಾಂಧತೆ ಹೆಚ್ಚಾಗಲಿದೆ. ಭೂಕಂಪ ಆಗುವ ಸಾಧ‍್ಯತೆಯಿದೆ. ಧಾರ್ಮಿಕ ಮುಖಂಡನ ಸಾವೂ ಆಗಲಿದೆ ಎಂದಿದ್ದರು.

ಅದರ ಜೊತೆಗೆ ಇನ್ನೊಂದು ವಿಚಾರವನ್ನೂ ಹೇಳಿದ್ದರು. ಯುಗಾದಿಗೆ ಮೊದಲು ಮಳೆಯಿಲ್ಲದೇ ಜನ ನೀರಿಗಾಗಿ ಹಾಹಾಕಾರ ನಡೆಸಬಹುದು. ಆದರೆ ಯುಗಾದಿ ನಂತರ ಮಳೆ ಸಾಧ‍್ಯತೆಯಿದೆ ಎಂದಿದ್ದರು. ಹೀಗಾಗಿ ಈ ಭವಿಷ್ಯ ನಿಜವಾಗುವುದೇ ಎಂದು ಜನರು ಎದಿರು ನೋಡುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರ ಸೇರಿದಂತೆ ಇಡೀ ರಾಜ್ಯದಲ್ಲಿ ಸೂಕ್ತ ಮಳೆಯಿಲ್ಲದೇ ಜನ ನೀರಿಗಾಗಿ ಪರದಾಡುವಂತಾಗಿದೆ. ಹೀಗಾಗಿ ಯುಗಾದಿಗೆ ಇನ್ನು ಒಂದೇ ತಿಂಗಳು ಬಾಕಿಯಿದ್ದು, ಕೋಡಿಶ್ರೀಗಳು ಭವಿಷ್ಯ ನುಡಿದಂತೆ ಮಳೆಯಾದರೆ ಜನರು ನೀರಿಗಾಗಿ ಬವಣೆ ಪಡುವುದು ಕೊಂಚ ಮಟ್ಟಿಗೆ ತಗ್ಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ