ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದ 19 ಮಂದಿ ಪತ್ತೆ

ಗುರುವಾರ, 2 ಏಪ್ರಿಲ್ 2020 (19:30 IST)
ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದ 19 ಮಂದಿಯನ್ನು ಪತ್ತೆ ಹಚ್ಚಲಾಗಿದೆ.

ತುಮಕೂರು ಜಿಲ್ಲೆಯಿಂದ  ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದ 19 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ವೈದ್ಯಕೀಯ ತಪಾಸಣೆ(ಮೆಡಿಕಲ್ ಸ್ಕ್ರಿನಿಂಗ್)ಗೊಳಪಡಿಸಲಾಗಿದೆ. ಹೀಗಂತ ಜಿಲ್ಲಾಧಿಕಾರಿ  ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

ವೈದ್ಯಕೀಯ ತಪಾಸಣೆಗೊಳಪಡಿಸಿದ 19 ಮಂದಿಯನ್ನು  ಐಸೋಲೇಶನ್‌ನಲ್ಲಿಡಲಾಗಿದೆ. ಈವರೆಗೂ ದೆಹಲಿಗೆ ತೆರಳಿದ್ದ 19 ಜನರನ್ನು ಮಾತ್ರ ಪತ್ತೆ ಹಚ್ಚಲಾಗಿದ್ದು, ಮಾರ್ಚ್ 8 ರಿಂದ 20 ರವರೆಗೂ ಇನ್ನೂ ಹೆಚ್ಚಿನ ಜನರು ಹೋಗಿರುವ ಸಾಧ್ಯತೆ ಇದೆ.

ತಬ್ಲಿಘಿ ಜಮಾತ್ ಸಭೆಗೆ ತೆರಳಿದವರ ಬಗ್ಗೆ ಮಾಹಿತಿಯುಳ್ಳ ಪತ್ರಿಕಾ ಮಾಧ್ಯಮದವರಾಗಲಿ ಅಥವಾ ಸಾರ್ವಜನಿಕರಾಗಲಿ ತುರ್ತಾಗಿ ಕಂಟ್ರೋಲ್ ರೂಂ ಸಂಖ್ಯೆ: 0816-2257398 ಕ್ಕೆ ಕರೆ ಮಾಡಿ ತಿಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ