ನಮ್ಮ ಸರ್ಕಾರ ಪಾರದರ್ಶಕ , ಜನಸ್ನೇಹಿ ಆಡಳಿತ ನೀಡಲಿದೆ- ನೂತನ ಸಚಿವ ಡಾ.ಕೆ.ಸುಧಾಕರ್

ಗುರುವಾರ, 6 ಫೆಬ್ರವರಿ 2020 (12:25 IST)
ಬೆಂಗಳೂರು : ತಮ್ಮನ್ನು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿದ್ದಕ್ಕೆ ಸಿಎಂ ಯಡಿಯೂರಪ್ಪಗೆ ನೂತನ ಸಚಿವ ಡಾ.ಕೆ.ಸುಧಾಕರ್ ಧನ್ಯವಾದ ಸಲ್ಲಿಸಿದ್ದಾರೆ.


ಇಂದು ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಮ್ಮ ಬಗ್ಗೆ ಕೆಲವರು ಹೇಳಬಾರದ್ದನ್ನೆಲ್ಲಾ ಹೇಳಿದ್ದರು. ಷಡ್ಯಂತ್ರ ಮಾಡಿದವರು ಆತ್ಯಾವಲೋಕನ ಮಾಡಿಕೊಳ್ಳಲಿ. ಅಧಿಕಾರ ಯಾರೋಬ್ಬರ ಸ್ವತ್ತೂ ಅಲ್ಲ  ಎಂದು ಹೇಳಿದ್ದಾರೆ.


 ಸಂವಿಧಾನ ಹೊಗಳುತ್ತಾರೆ. ಆದ್ರೆ ತದ್ವಿರುದ್ಧವಾಗಿ ಮಡೀತಾರೆ. ಅಂಥವರು ಹೊರಗೆ ಹೋಗುವ ಕಾಲ ಬಂದಿದೆ. ಜನತೆಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ, ಇದಕ್ಕಾಗಿ ಸಿಎಂ ಯಡಿಯೂರಪ್ಪಗೆ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ಸರ್ಕಾರ ಪಾರದರ್ಶಕ , ಜನಸ್ನೇಹಿ ಆಡಳಿತ ನೀಡಲಿದೆ  ಎಂದು ನೂತನ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ