ಪಾದರಾಯನಪುರ ಗಲಭೆ ಕೇಸ್ : 54 ಜನರ ಬಂಧನ, ಕೆಮ್ಮಿದ್ರೆ ಹುಷಾರ್

ಸೋಮವಾರ, 20 ಏಪ್ರಿಲ್ 2020 (15:36 IST)
ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಕಿತ್ತಾಕಿ ವೈದ್ಯರು, ಪೊಲೀಸರು, ಕೊರೊನಾ ವಾರಿಯರ್ಸ್ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾದ ಘಟನೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ.

ಪಾದರಾಯನಪುರ ಘಟನೆ ಕುರಿತಂತೆ ಒಟ್ಟು ಐದು ಕೇಸ್ ಗಳು ದಾಖಲಾಗಿವೆ. ಇದುವರೆಗೆ 54 ಜನರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು 8 ತಂಡಗಳನ್ನು ಮಾಡಿದ್ದು ಬಲೆ ಬೀಸಲಾಗಿದೆ.

ಪುಡಿ ರೌಡಿಗಳ ಅಟ್ಟಹಾಸಕ್ಕೆ ಕೊರೊನಾ ವಾರಿಯರ್ಸ್, ಪೊಲೀಸರು ನಲುಗಿದ್ದರು. ಏಕಾಏಕಿಯಾಗಿ ನೂರಾರು ಜನರು ಬಂದು ಹಲ್ಲೆ ನಡೆಸಿದ್ದರು. ಇದಕ್ಕೆ ಇಡೀ ರಾಜ್ಯವೇ ಖಂಡನೆ ವ್ಯಕ್ತಪಡಿಸುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ