ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಲು ಮಲ್ಲಿಕಾರ್ಜುನ ಖರ್ಗೆ ಮೇಲೆ ಒತ್ತಡ

ಗುರುವಾರ, 23 ಜನವರಿ 2020 (10:58 IST)
ಬೆಂಗಳೂರು : ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಲು ಮಲ್ಲಿಕಾರ್ಜುನ ಖರ್ಗೆ ಮೇಲೆ ದಲಿತ ನಾಯಕರು ಒತ್ತಡ ಹಾಕುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಲ್ಲಿಕಾರ್ಜುನ ಖರ್ಗೆ ಮತ್ತು ದಲಿತ ನಾಯಕರ ಮಧ್ಯೆ ರಹಸ್ಯ ಮಾತುಕತೆ ನಡೆದಿದ್ದು, ದಲಿತ ಸಿಎಂ ಅಜೆಂಡಾ ಮುಂದಿಟ್ಟು ಖರ್ಗೆ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ದಲಿತ ಸಿಎಂ ಈಡೇರಬೇಕಾದ್ರೆ ನೀವೇ ಅಧ್ಯಕ್ಷರಾಗಿ, ದಲಿತ ಲೆಫ್ಟ್ ಮತ್ತು ರೈಟ್ ಸಮುದಾಯ ಮತಗಳನ್ನ ಒಟ್ಟುಗೂಡಿಸೋಣ, ನೀವು ನಾಯಕತ್ವ ವಹಿಸಿ ನಿಮ್ಮ ಜೊತೆ ನಾವಿರ್ತೇವೆ ಎಂದು ಕಾಂಗ್ರೆಸ್ ದಲಿತ ನಾಯಕರು ಖರ್ಗೆಯನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ