ಪ್ರಧಾನಿ ಮೋದಿ ಒಬ್ಬ ಆಧುನಿಕ ಭಸ್ಮಾಸುರ ಎಂದ ಮಾಜಿ ಸಂಸದ

ಭಾನುವಾರ, 9 ಫೆಬ್ರವರಿ 2020 (08:18 IST)
ಹಾಸನ: ಪ್ರಧಾನಿ ಮೋದಿ ಒಬ್ಬ ಆಧುನಿಕ ಭಸ್ಮಾಸುರ ಎಂದು ಹೇಳುವುದರ ಮೂಲಕ ಮಾಜಿ ಸಂಸದ ವಿಎಸ್ ಉಗ್ರಪ್ಪ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಒಬ್ಬ ಆಧುನಿಕ ಭಸ್ಮಾಸುರ. ಯಾಕೆಂದರೆ ಅವರು ಕೈ ಇಟ್ಟ ಕಡೆ ನಾಶವಾಗುತ್ತದೆ. ಪ್ರಧಾನಿಯಾಗಿ ಇಡೀ ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಿದರು. ಪೌರತ್ವ ದ ಮೂಲಕ ದೇಶದಲ್ಲಿ ಕಿಚ್ಚು ಹತ್ತಿಸಿದರು ಎಂದು ಕಿಡಿಕಾರಿದ್ದಾರೆ.

 

ದೇಶದ ಜಿಡಿಪಿ ಪಾತಳಕ್ಕೆ ಕುಸಿದಿದೆ. ಬಜೆಟ್ ಮಂಡನೆಯಲ್ಲಿ 98 ಲಕ್ಷ ಕೋಟಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಮೇಲೆತ್ತುವ ಬದಲು ಭಾವನಾತ್ಮಕ ವಿಷಯಗಳ ಮೂಲಕ ದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ಅವರು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ