ಜನವರಿ 1ರಿಂದ ರಾಜ್ಯದಲ್ಲಿ ಶಾಲೆ ಆರಂಭ ವಿಚಾರ; ಸುರೇಶ್ ಕುಮಾರ್ ವಿರುದ್ಧ ವಿಶ್ವನಾಥ್ ಕಿಡಿ

ಗುರುವಾರ, 24 ಡಿಸೆಂಬರ್ 2020 (12:15 IST)
ಮೈಸೂರು : ಜನವರಿ 1ರಿಂದ ರಾಜ್ಯದಲ್ಲಿ ಶಾಲೆ ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಬಿಜೆಪಿ ಎಂಎಲ್ ಸಿ ವಿಶ್ವನಾಥ್ ಕಿಡಿಕಾರಿದ್ದಾರೆ.

ಉತ್ತರಾಯಣ  ಪುಣ್ಯ ಕಾಲದ ನಂತರ ಶಾಲೆ ಆರಂಭಿಸಿ. ಸದ್ಯಕ್ಕೆ ಕೊರೊನಾ 2ನೇ ಅಲೆ ಜೋರಾಗಿದೆ. ಮಕ್ಕಳ ಜೀವದ ಜೊತೆ ಚೆಲ್ಲಾಟ ಸರಿಯಲ್ಲ. ಸಂಕ್ರಾಂತಿ ಹಬ್ಬದ ಬಳಿಕ ಶಾಲೆ ಆರಂಭಿಸಿ. ಜನವರಿ 1ರಿಂದ ಶಾಲೆ ಆರಂಭಿಸೋದು ಬೇಡ ಎಂದು ಅವರು ಹೇಳಿದ್ದಾರೆ.

ನೈಟ್ ಕರ್ಪ್ಯೂ ಜಾರಿ ವಿಚಾರ ನೈಟ್ ಕರ್ಪ್ಯೂ ಬಗ್ಗೆ ಪರಿಶೀಲನೆ ಮಾಡಬೇಕು. ನೈಟ್ ಕರ್ಪ್ಯೂ ಜಾರಿ ಸರಿ ಇದೆ ಎಂದು ಹೇಳಬಹುದು. ಸರ್ಕಾರದ ಪರವಾಗಿ ನಾನು ಈ ಮಾತು ಹೇಳಬಹುದು. ರಾಜ್ಯದ ಜನ ಇದನ್ನು ಜೋಕ್ ಆಗಿ ತೆಗೆದುಕೊಂಡಿದ್ದಾರೆ. ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ