ಈ ಕಾರಣಕ್ಕೆ ಜೀವ ಕಳೆದುಕೊಂಡ ಮುಖಂಡ - ಜೆಡಿಎಸ್ ಗೆ ಆಘಾತ

ಶನಿವಾರ, 4 ಜನವರಿ 2020 (13:42 IST)
ಜೆಡಿಎಸ್ ನ ಮುಖಂಡರೊಬ್ಬರು ಆತ್ಮಹತ್ಯೆಗೆ ಶರಣಾಗೋ ಮೂಲಕ ಮನೆಮಂದಿಗೆ ಹಾಗೂ ಪಕ್ಷಕ್ಕೆ ಕಂಬನಿ ಮಿಡಿಯುವಂತೆ ಮಾಡಿದ್ದಾರೆ.

ಉಡುಪಿ ಜೆಡಿಎಸ್ ನ ವಕ್ತಾರರಾಗಿದ್ದ ಪ್ರದೀಪ್ ಬೈಲೂರು (38) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಡುಪಿಯ ಕೊರಂಗ್ರಪಾಡಿ ಹತ್ತಿರದ ಬೈಲೂರುದಲ್ಲಿ ಘಟನೆ ನಡೆದಿದ್ದು, ಕೊರಂಗ್ರಪಾಡಿ ಹತ್ತಿರದಲ್ಲಿ ಪ್ರದೀಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆರ್ಥಿಕ ಮುಗ್ಗಟ್ಟು ಹಾಗೂ ಹಣಕಾಸಿನ ವಿಚಾರವೇ ಪ್ರದೀಪ್ ಆತ್ಮಹತ್ಯೆಗೆ ಕಾರಣ ಅಂತ ಮೇಲ್ನೋಟಕ್ಕೆ ಶಂಕೆ ವ್ಯಕ್ತಪಡಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ