ಕೂಲಿಯನ್ನೇ ಕೊಂದ ಅಂಗಡಿ ಮಾಲೀಕ: ಕಾರಣ?

ಶನಿವಾರ, 4 ಮೇ 2019 (18:18 IST)
ಅಂಗಡಿಯೊಂದರ ಮಾಲೀಕನೊಬ್ಬ ತನ್ನ ಅಂಗಡಿಯಲ್ಲಿ ಹಮಾಲಿ ಮಾಡಿಕೊಂಡಿದ್ದ ವ್ಯಕ್ತಿಯನ್ನು ಕೊಲೆಮಾಡಿದ್ದಾನೆ.

ಕೃತ್ಯ ಖಂಡಿಸಿ ಹಮಾಲರಿಂದ ಪ್ರತಿಭಟನೆ ನಡೆದಿದ್ದು, ದಾವಣಗೆರೆ ಈರುಳ್ಳಿ‌ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಮಾಲೀಕನ ಅಂಗಡಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅಂಗಡಿ ಗಾಜು ಹಾಗೂ  ಉಪಕರಣಗಳು ಧ್ವಂಸಗೊಂಡಿವೆ.

ಹಮಾಲಿ ಬಸಾಪುರ ವೀರೇಶ (35) ಎಂಬಾತ ಕೊಲೆಗೀಡಾದವನು.

ಏ. 26ರಂದು ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ನಡೆದ ಕೊಲೆ ಪ್ರಕರಣದ ಪೊಲೀಸ್ ತನಿಖೆಯಿಂದ ಸತ್ಯಾಂಶ ಬಯಲಾಗಿದೆ.

ಈರುಳ್ಳಿ ದಲ್ಲಾಳಿ ಅಂಗಡಿ ಮಾಲೀಕ ಮುತ್ಯುಂಜಯ ಜ್ಯೋತಿಬಣದ  ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ವೀರೇಶನನ್ನು ಹೊಡೆದು ಕೊಲೆ ಮಾಡಿ ಕಾರ್ ನಲ್ಲಿ ಹಾಕಿ ಸುಟ್ಟಿದ್ದಾನೆ ಆರೋಪಿ ಮೃತ್ಯುಂಜಯ ಎನ್ನಲಾಗಿದೆ. ರಾಣೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ವಶದಲ್ಲಿ ಆರೋಪಿ ಮೃತ್ಯುಂಜಯ ಇದ್ದಾನೆ. ಪ್ರಕರಣ ಖಂಡಿಸಿ ದಾವಣಗೆರೆಯಲ್ಲಿ ಹಮಾಲರಿಂದ ಪ್ರತಿಭಟನೆ ನಡೆಯಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ