ಬಿಜೆಪಿ ಶಾಸಕರಿಂದ ರಾಜೀನಾಮೆ ಪರ್ವ ಶುರು? ಬಿಎಸ್ವೈಗೆ ಶಾಕ್

ಗುರುವಾರ, 20 ಫೆಬ್ರವರಿ 2020 (12:13 IST)
ಬಿಜೆಪಿ ಶಾಸಕರು ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂತ ರಾಜೀನಾಮೆ ಮುಂದಾಗ್ತಿದ್ದಾರೆ.

ಹೀಗಂತ ಹೊಸ ಸುದ್ದಿಯೊಂದು ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು, ಇದರಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಗ್ ಶಾಕ್ ಗೆ ಒಳಗಾಗ್ತಿದ್ದಾರೆ ಎನ್ನಲಾಗಿದೆ.

ಜಗದೀಶ್ ಶೆಟ್ಟರ್ ನಿವಾಸದಲ್ಲಿ ಕೆಲವು ಶಾಸಕರು ಸಭೆ ನಡೆಸಿದ ಬೆನ್ನಲ್ಲೇ ಇದೀಗ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿರೋದು ಕುತೂಹಲ ಕೆರಳಿಸಿದೆ.

ಉಮೇಶ್ ಕತ್ತಿ ಜೊತೆಗೆ ಸಚಿವ ಸ್ಥಾನ ಸಿಗದ ಬಿಜೆಪಿ ಶಾಸಕರು ಇದ್ದರು ಅನ್ನೋ ವಿಷಯ ಜೋರಾದ ಚರ್ಚೆಗೆ ಕಾರಣವಾಗ್ತಿದೆ. ಒಂದು ವೇಳೆ ಈ ಶಾಸಕರು ರಾಜೀನಾಮೆ ಹಾದಿ ಹಿಡಿದರೆ ಆಗ ಬಿಜೆಪಿ ಸರಕಾರ ಪತನವಾಗೋದು ಗ್ಯಾರಂಟಿ ಎನ್ನಲಾಗ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ