ಸಿದ್ದರಾವಣ ಸಂಹಾರ‌ಕ್ಕೆ ಶ್ರೀರಾಮುಲು ಸಿದ್ಧ: ಜನಾರ್ಧನ್ ರೆಡ್ಡಿ

ಶನಿವಾರ, 21 ಏಪ್ರಿಲ್ 2018 (15:46 IST)
ಸಿಎಂ ಸಿದ್ದರಾಮಯ್ಯ ಅಲ್ಲ ಸಿದ್ದರಾವಣ ಅವರನ್ನ ಸಂಹಾರ‌ ಮಾಡೋದಿಕ್ಕೆ ಶ್ರೀರಾಮುಲು ಸಿದ್ಧರಾಗಿದ್ದಾರೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ. 
ಮೊಳಕಾಲ್ಮೂರಿನಲ್ಲಿ ಮಾತನಾಡಿದ ಗಾಲಿ ಜನಾರ್ಧನ ರೆಡ್ಡಿ ಅವರು ಈ ಕ್ಷೇತ್ರದ ಪ್ರತೀ ಬೀದಿ ಬೀದಿ ಹಳ್ಳಿಗೆ ಬಂದು ನಾನು ಮತ ಕೇಳುತ್ತೇನೆ. ಶ್ರೀರಾಮುಲು ಗೆಲುವು ಖಚಿತ ಎಂದರು.
 
ತನ್ನ ಸ್ನೇಹಿತನ ಗೆಲುವಿಗಾಗಿ ಪಣತೊಟ್ಟಿರುವ ಗಾಲಿ ಜನಾರ್ಧನ ರೆಡ್ಡಿ, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಶ್ರೀರಾಮುಲು ನಿಂತರೂ ಗೆಲುವು ಸಾಧಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ