ಸುಳ್ವಾಡಿ ದುರಂತ: ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ

ಗುರುವಾರ, 24 ಜನವರಿ 2019 (19:34 IST)
ಸುಳ್ವಾಡಿ ಪ್ರಕರಣದಲ್ಲಿ ವಿಷ ಪ್ರಸಾದ ಸೇವಿಸಿ ಮೃತಪಟ್ಟ 17 ಕುಟುಂಬಗಳಿಗೆ2 ಲಕ್ಷ ರೂ. ಹಾಗೂ ಚಿಕಿತ್ಸೆ ಪಡೆದು ಮರಳಿ ಬಂದವರಿಗೆ ತಲಾ 50 ಸಾವಿರ ರೂ.ಗಳನ್ನು  ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸಂತ್ರಸ್ತರ ನಿಧಿಯಿಂದ ವಿತರಣೆ ಮಾಡಲಾಯಿತು.

ಸುಳ್ವಾಡಿ, ಬಿದರಹಳ್ಳಿ ಮಾರ್ಟಳ್ಳಿ, ಎಂಜಿ ದೊಡ್ಡಿ ಗ್ರಾಮಗಳ 17 ಮೃತಪಟ್ಟ ಕುಟುಂಬಗಳಿಗೆ ಕೆಪಿಸಿಸಿ ವತಿಯಿಂದ ತಲಾ 50 ಸಾವಿರ ರೂಪಾಯಿಗಳ ಪರಿಹಾರದ ಚೆಕ್ಕನ್ನು ಸಂಸದ ಆರ್.ದೃವನಾರಾಯಣ್ ವಿತರಿಸಿದರು. ಬಳಿಕ ಮಾತನಾಡಿದ ಸಂಸದರು, ದೇಶದ ಯಾವುದೇ ಮೂಲೆಯಲ್ಲೂ ನಡೆಯದ ಒಂದು ದುರ್ಘಟನೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದು ಹೋಯ್ತು. ಈ ಒಂದು ವಿಚಾರ ಮಾಧ್ಯಮದ ಮೂಲಕ ಇಡೀ ಪ್ರಪಂಚದಾದ್ಯಂತ ವಿಚಾರ ತಿಳಿದು ಸಂಸತ್ತಿನಲ್ಲೂ ಸಹಾ ಈ ವಿಷಯ ಚರ್ಚೆಯಾಗಿದೆ. ಸುಮಿತ್ರಾ ಮಹಾಜನ್ ಅವರ ಗಮನ ಸೆಳೆಯಲಾಯಿತು. ಅವರು ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಆಗ ನಾನು ಈ ‌ಒಂದು ಪ್ರಕರಣದ ಬಗ್ಗೆ ವಿಷಯ ಓದಿದಾಗ ಕೇಂದ್ರದಿಂದ ಪರಿಹಾರ ನೀಡಲು ಒಪ್ಪಿಕೊಂಡರು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ