ಕೊರೊನಾ ಕಂಟ್ರೋಲ್ ಬಗ್ಗೆ ಚರ್ಚೆ; ಇಂದು ಸಚಿವ ಸಂಪುಟ ಸಭೆ ಕರೆದ ಸಿಎಂ

ಗುರುವಾರ, 9 ಜುಲೈ 2020 (09:47 IST)
Normal 0 false false false EN-US X-NONE X-NONE

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ  ಸಿಎಂ ಬಿಎಸ್ ವೈ ಇಂದು ಸಚಿವ ಸಂಪುಟ ಸಭೆ ಕರೆದಿದ್ದಾರೆ.


ಬೆಳಿಗ್ಗೆ 11 ಗಂಟೆಗೆ ಸಿಎಂ ಬಿಎಸ್ ವೈ ನೇತೃತ್ವದಲ್ಲಿ ನಡೆಯುವ  ಸಚಿವ ಸಂಪುಟ ಸಭೆಯಲ್ಲಿ ಕೊರೊನಾ ಕಂಟ್ರೋಲ್ ಬಗ್ಗೆ ಸಿಎಂ ಮಹತ್ವದ ಚರ್ಚೆ ನಡೆಸಲಿದ್ದಾರೆ, ಆದರೆ ಲಾಕ್ ಡೌನ್ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ಇಲ್ಲ ಎನ್ನಲಾಗಿದೆ.

ಲಾಕ್ ಡೌನ್ ಮಾಡುವ ಬಗ್ಗೆ ಹಣಕಾಸು ಇಲಾಖೆಯಿಂದಲೂ ವಿರೋಧ ವ್ಯಕ್ತವಾಗಿದೆ. ಅಲ್ಲದೇ  ಬೆಂಗಳೂರಿನಲ್ಲಿ ಯಾವ ಕಾರಣಕ್ಕೂ ಲಾಕ್ ಮಾಡಲ್ಲ.. ಸಂಡೇ ಜತೆ ಶನಿವಾರ ಲಾಕ್ ಡೌನ್ ಇರಲ್ಲ ಎನ್ನುವುದರ ಮೂಲಕ ಲಾಕ್ ಡೌನ್ ಚಿಂತನೆಯಿಂದ ಸಿಎಂ ದೂರವಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ