‌ಲವ್ ನಿರಾಕರಿಸಿದ ಹುಡುಗಿಗೆ ಆ್ಯಸಿಡ್ ಎರಚಿದ್ದ ಭೂಪ ಅಂದರ್

ಬುಧವಾರ, 29 ಜನವರಿ 2020 (20:33 IST)

ಯುವತಿಯೊಬ್ಬಳ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂತ ಪ್ರಾಣಾ ತಿಂದಿದ್ದಲ್ಲದೇ ಅವನ ಪ್ರೀತಿಗೆ ನೋ ಎಂದೋಳಿಗೆ ಆ್ಯಸಿಡ್ ಹಾಕಿ ಪಾಗಲ್ ಪ್ರೇಮಿ ಪರಾರಿಯಾಗಿದ್ದನು.
 

ಆ್ಯಸಿಡ್ ದಾಳಿಯಿಂದ ಗಂಭೀರ ಗಾಯಗೊಂಡಿರೋ ಯುವತಿಗೆ ಚಿಕಿತ್ಸೆ ಮುಂದುವರಿದಿದೆ. ಪಾಗಲ್ ಪ್ರೇಮಿಗಾಗಿ ಬಲೆ ಬೀಸಿದ್ದ ಪೊಲೀಸರು ಕೊನೆಗೂ ಅಂದರ್ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ತಲೆ ಮರೆಸಿಕೊಂಡಿದ್ದ ಪಾಗಲ್ ಪ್ರೇಮಿ ಪ್ರಸಾದ್ ಚಿಕ್ಕಳ್ಳಿ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಆರೋಪಿ ಮಾಡಿರೋ ಆ್ಯಸಿಡ್ ದಾಳಿಯಿಂದಾಗಿ ಯುವತಿಯ ಕೈ, ಮುಖ, ಕಣ್ಣಿಗೆ ಹಾನಿಯಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ