ಎಚ್ಚರ ತಪ್ಪಿದ ಅಡುಗೆ ಸಹಾಯಕಿ - ಬಿಸಿ ಬಿಸಿ ಸಾಂಬಾರ್ ಮೂವರು ಮಕ್ಕಳ ಮೈಮೇಲೆ ಬಿತ್ತು

ಗುರುವಾರ, 12 ಡಿಸೆಂಬರ್ 2019 (15:51 IST)
ಅಂಗನವಾಡಿ ಕೇಂದ್ರದಲ್ಲಿ ಬಿಸಿ ಸಾರು ಮೈಮೇಲೆ ಬಿದ್ದ ಪರಿಣಾಮ ಮೂವರು ಮಕ್ಕಳು ಮತ್ತು ಸಹಾಯಕಿ ಗಂಭೀರ ಗಾಯಗೊಂಡಿದ್ದಾರೆ.

ಬೆಳಗಾವಿ ತಾಲ್ಲೂಕಿನ ಗೋಲ್ಯಾಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಘಟನೆ ನಡೆದಿದೆ.

ಸಂಜನಾ, ಸಮೀಕ್ಷಾ, ಸಾನ್ವಿ, ಸಹಾಯಕಿ ಲೀಲಾವತಿ ಗೋರಲ್ ಎಂಬುವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಕ್ಕಳನ್ನು ಕೆ ಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಡುಗೆ ಸಹಾಯಕಿ ಲೀಲಾವತಿ ಸಾರು ತಯಾರಿಸುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಹಿಡಿದಿದ್ದ ಪಾತ್ರೆಯನ್ನು ಕೈ ಬಿಟ್ಟಿದ್ದಾರೆ. ಬಿಸಿ ಸಾರು ಅವರ ಮೇಲೆ ಹಾಗೂ ಮಕ್ಕಳ ಮೇಲೆ ಬಿದ್ದಿದ್ದರಿಂದ ಸುಟ್ಟ ಗಾಯಗಳಾಗಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ