ಪ್ರತಿಭಟನೆ ತೀವ್ರವಾದ ಹಿನ್ನಲೆ; ಕುರುಬರ ಜೊತೆ ಸಂಧಾನಕ್ಕೆ ಮುಂದಾದ ಮಾಧುಸ್ವಾಮಿ

ಗುರುವಾರ, 21 ನವೆಂಬರ್ 2019 (11:21 IST)
ಬೆಂಗಳೂರು :ಪ್ರತಿಭಟನೆ ತೀವ್ರವಾದ ಹಿನ್ನಲೆ ಕುರುಬರ ಜೊತೆ ಮಾಧುಸ್ವಾಮಿ ಸಂಧಾನಕ್ಕೆ ಮುಂದಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.



ಕುರುಬ ಸಮುದಾಯದ ಬಗ್ಗೆ ಹಾಗೂ ಕಾಗಿನೆಲೆ  ಶ್ರೀಗಳ  ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಚವ ಮಾಧುಸ್ವಾಮಿ ಕ್ಷಮೆ ಕೋರಲು ಹಿಂದೇಟು ಹಾಕಿದ್ದಾರೆ. ಈ ಬಗ್ಗೆ ಕುರುಬ ಸಮುದಾಯ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿವೆ.


ಇದೀಗ ಪ್ರತಿಭಟನೆ ತೀವ್ರವಾದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ  ಮಾಧುಸ್ವಾಮಿ ಇಂದು ಮಧ್ಯಾಹ್ನ 2.30ಕ್ಕೆ  ಕಾಗಿನೆಲೆ ಈಶ್ವರಾನಂದಪುರಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಕ್ಷಮೆ ಯಾಚಿಸಲಿದ್ದಾರೆ ಎನ್ನಲಾಗಿದೆ. ಇವರಿಗೆ ಗೃಹ ಸಚಿವ ಬೊಮ್ಮಾಯಿ ಸಾಥ್ ನೀಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ