ಪಕ್ಷದ ಸಹಕಾರ ಸಿಗುತ್ತಿಲ್ಲವೆಂದು ಬೇಸರಗೊಂಡ ಜೆಡಿಎಸ್ ಅಭ್ಯರ್ಥಿ

ಬುಧವಾರ, 4 ಡಿಸೆಂಬರ್ 2019 (11:20 IST)
ಯಲ್ಲಾಪುರ : ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ.


ಆದರೆ ಈ ಮಧ್ಯ ಯಲ್ಲಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ತಮ್ಮ ಪರ ಪಕ್ಷದ ಪದಾಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಫೇಸ್ ಬುಕ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

 

‘ನಾನು ಪಕ್ಷೇತರ ಅಭ್ಯರ್ಥಿಯಾಗಿ ಎಲೆಕ್ಷನ್ ಗೆ ನಿಂತಿದ್ದೇನೆ ಅನ್ನಿಸುತ್ತಿದೆ. ಜೆಡಿಎಸ್ ನಲ್ಲಿ ಯಾವ ಪದಾಧಿಕಾರಿಗಳು ಕೂಡ ಹೆಲ್ಪ್ ಮಾಡುತ್ತಿಲ್ಲ. ಎಲ್ಲರೂ ವಿರೋಧ ಮಾಡುತ್ತಿದ್ದಾರೆ ಎಂದು ಚೈತ್ರಾ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ