ಕೊರೊನಾ ಹರಡೋದು ಹೆಚ್ಚಾಗಿದೆ ಎಂದ ಸಚಿವ

ಮಂಗಳವಾರ, 14 ಏಪ್ರಿಲ್ 2020 (17:25 IST)
ದೇಶದ 135 ಕೋಟಿ ಜನರ ಆರೋಗ್ಯದ ದೃಷ್ಠಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ಸಂಬಂಧಿಸಿದಂತೆ ಮೇ 3  ರವರೆಗೆ ತೆಗೆದುಕೊಂಡಿರುವ ಲಾಕ್ ಡೌನ್ ನ್ನು ಪ್ರತಿಯೊಬ್ಬರೂ ಪಾಲನೆ ಮಾಡುಬೇಕು.

ಹೀಗಂತ ಸಚಿವ ಜಗದೀಶ ಶೆಟ್ಟರ್ ಹೇಳಿದ್ದು,  ನರೇಂದ್ರ  ಮೋದಿ ಅವರು ಸೂಚಿಸಿದಂತೆ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೊಳಿಸಲಾಗುವುದು. ಇದೇ ದಿ 20 ರ ವರೆಗೆ ಕಾಯ್ದು ನೋಡಿ ಕೆಲವೊಂದಕ್ಕೆ ಸರಳೀಕರಣ ಮಾಡಲಾಗುವುದು ಎಂದರು. ಪ್ರತಿಯೊಬ್ಬ ಭಾರತೀಯನ ಹಿತದೃಷ್ಡಿಯಿಂದ ಈ ಲಾಕ್ ಡೌನ್ ಜಾರಿಯಲ್ಲಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು.

ಎಷ್ಟೇ ಕಟ್ಟುನಿಟ್ಟಾಗಿ ರೋಗ ಹರಡದಂತೆ ಮುಂಜಾಗೃತೆ ವಹಿಸುತ್ತಿದ್ದರೂ ಅದರ ಹರಡುವಿಕೆ ಹೆಚ್ಚಾಗಿದೆ ಇದು ಕಳವಳಕಾರಿಯಾಗಿದೆ ಎಂದು ಸಚಿವ ಶೆಟ್ಟರ್ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ