ಈ ಕಾರಣಕ್ಕೆ ಮಾದರಿಯಾದ ಮುಸ್ಲಿಂ ಕುಟುಂಬ!

ಸೋಮವಾರ, 19 ಆಗಸ್ಟ್ 2019 (20:28 IST)
ನೆರೆ ಸಂತ್ರಸ್ಥರ ನೆರವಿಗೆ ಮುಂದಾದ ಮುಸ್ಲಿಂ ಸಮುದಾಯದವರು ಮಾದರಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಮುಸ್ಲಿಂ ಸಮುದಾಯ ಬೆಳಗಾವಿಯ ಗೋಕಾನಲ್ಲಿ ನೆರೆಹಾವಳಿಗೆ ತುತ್ತಾಗಿರೋ ಸಂತ್ರಸ್ಥರ ಕಷ್ಟಕ್ಕೆ ಸ್ಪಂದನೆ ಮಾಡಿದ್ದಾರೆ.

ದಿನ ನಿತ್ಯದ ವಸ್ತುಗಳನ್ನು ಲಾರಿಯಲ್ಲಿ ತುಂಬಿ ರವಾನಿಸಿದ್ದಾರೆ. ಕಳೆದ ರಾತ್ರಿ ಲಾರಿಯಲ್ಲಿ ಅಕ್ಕಿ, ಬೇಳೆ, ಹೊದಿಕೆ,   ನೀರು ಮತ್ತು ಬ್ರೆಡ್ ಒಳಗೊಂಡ ಲಾರಿ ಹಿರಿಯೂರಿನಿಂದ ಹೊರಟಿತು.

ಈ ಸಾಮಾಗ್ರಿಗಳನ್ನು ಹಂಚಲು ಸುಮಾರು ಮೂವತ್ತು ಯುವಕರ ತಂಡ ಜೊತೆಗೆ ಹೊರಟಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಜನರು ಮಾದರಿಯಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ