ಪತ್ನಿಯನ್ನು ಕಟ್ಟಿ ಹಾಕಿ ಬಾಯಿ ಮುಚ್ಚಿ ನೀಚ ಕೆಲಸ ಮಾಡಿದ ದುರುಳರು

ಮಂಗಳವಾರ, 21 ಜನವರಿ 2020 (14:13 IST)
ಪತ್ನಿಯನ್ನುಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಮಾಡಬಾರದ್ದನ್ನು ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ತಡರಾತ್ರಿ ಬಾಗಿಲು ಬಡಿದು ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿಯನ್ನು ಹಾಗೂ ಮಕ್ಕಳನ್ನು ಕಟ್ಟಿ ಹಾಕಿ ಗಂಡನಿಗೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ.

ಮಂಡ್ಯನಗರದಲ್ಲಿ ಘಟನೆ ನಡೆದಿದ್ದು, ರಾಜಸ್ಥಾನದ ಬಂಡುರಾಮ್ ದುಷ್ಕರ್ಮಿಗಳ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ಈತ ಹಾರ್ಡವೇರ್ ಬ್ಯುಸಿನೆಸ್ ಮಾಡುತ್ತಿದ್ದನು.  

ಕೊಲೆ ಮಾಡಿ ಪತ್ನಿಯ ಹತ್ತಿರವಿದ್ದ ಚಿನ್ನಾಭರಣ ಹಾಗೂ ಮೊಬೈಲ್ ಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ