ಸಚಿವ ಶ್ರೀರಾಮುಲು ಟೈಮ್ ಕೇಳಿದ್ಯಾಕೆ?

ಬುಧವಾರ, 15 ಜುಲೈ 2020 (14:19 IST)
ರಾಜ್ಯದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಟೈಮ್ ಕೇಳಿದ್ದಾರೆ.

ಆಯುಷ್ ಇಲಾಖೆ  ವೈದ್ಯರ ಸಮಸ್ಯೆ ಬಗೆಹರಿಸಲು  ಕಾಲಾವಕಾಶ ಕೇಳಿದ್ದಾರೆ ಸಚಿವ ಬಿ. ಶ್ರೀರಾಮುಲು.

ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಬಳಿಗೆ ಹೋಗಿ ವೈದ್ಯರ ಸಮಸ್ಯೆ  ಬಗೆಹರಿಸುವೆ. ಪಿಜಿ ವಿದ್ಯಾರ್ಥಿಗಳ ಸ್ಟೈಫಂಡ್ ನೀಡುವ ವಿಚಾರ ಬಗೆಹರಿದಿದೆ ಎಂದಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ಆಯುಷ್ ಅಧಿಕಾರಿಗಳು ಕೆಲಸ ಮಾಡ್ತಾ ಇದ್ದು ವೇತನ ಬಹಳ ಕಡಿಮೆ ಇದೆ.  ಕೋವಿಡ್ ಸಮಯದಲ್ಲಿ  ಆಯುಷ್ ವೈದ್ಯರು ತುಂಬಾ ಶ್ರಮ ಪಟ್ಟು ಕೆಲಸ ಮಾಡಿದ್ದಾರೆ.

ಆಯುಷ್ ವೈದ್ಯರ ಸಮಸ್ಯೆ - ವೇತನ ತಾರತಮ್ಯ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ