ಮಂಗಳೂರಿನಲ್ಲಿ ಪೊಲೀಸ್ ಫೈರಿಂಗ್ ಗೆ ಇಬ್ಬರು ಸಾವು ; ಪರಿಹಾರದ ಕುರಿತು ಸಿಎಂ ಹೇಳಿದ್ದೇನು?

ಬುಧವಾರ, 25 ಡಿಸೆಂಬರ್ 2019 (11:43 IST)
ಬೆಂಗಳೂರು : ಮಂಗಳೂರಿನಲ್ಲಿ ಪೊಲೀಸ್ ಫೈರಿಂಗ್ ಗೆ ಇಬ್ಬರು ಸಾವು ಪ್ರಕರಣ ಅಪರಾಧಿಗಳಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.



ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಂಗಳೂರಿನಲ್ಲಿ ಪೊಲೀಸ್ ಫೈರಿಂಗ್ ನಲ್ಲಿ ಸಾವನಪ್ಪಿದವರ ಕುಟುಂಬಕ್ಕೆ ಪರಿಹಾರ ಕೊಡುವ ಬಗ್ಗೆ ತನಿಖೆ ನಂತರ ಚರ್ಚೆ ನಡೆಸುತ್ತೇವೆ. ಮಂಗಳೂರು ಗಲಭೆ ಬಗ್ಗೆ ತನಿಖೆಯ ನಂತರ ನಿರ್ಧಾರ ಮಾಡಲಾಗುವುದು. ತನಿಖೆಯಾಗುವವರೆಗೂ 1 ರೂಪಾಯಿ ಕೊಡಲ್ಲ ಎಂದು ಹೇಳಿದ್ದಾರೆ.


ಅಲ್ಲದೇ ತನಿಖೆಯಲ್ಲಿ ಮೃತರು ತಪ್ಪಿತಸ್ಥರೆಂದು ಸಾಬೀತಾದರೆ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವುದು ಅಪರಾಧ. ಹೀಗಾಗಿ ತನಿಖೆ ಮುಗಿಯುವವರೆಗೂ ಪರಿಹಾರ ನೀಡಲ್ಲ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ